masthmagaa.com:
ಬಿಜೆಪಿ ಹಿರಿಯ ನಾಯಕ, ಮಾಜಿ ಉಪ ಪ್ರಧಾನಿ ಲಾಲ್ ಕೃಷ್ಣ ಅಡ್ವಾನಿ ಅವ್ರಿಗೆ ಭಾರತದ ಅತ್ಯುನ್ನತ ಪ್ರಶಸ್ತಿ ʻಭಾರತ ರತ್ನʼ ಘೋಷಣೆ ಮಾಡಲಾಗಿದೆ. ಪ್ರಧಾನಿ ಮೋದಿ ಈ ವಿಚಾರವನ್ನ ಅನೌನ್ಸ್ ಮಾಡಿ, ʻಅಡ್ವಾನಿಯವ್ರಿಗೆ ಭಾರತ ರತ್ನ ಘೋಷಿಸಿದ್ದು ನನಗೆ ಅತ್ಯಂತ ಖುಷಿ ತಂದಿದೆ. ನಾನು ಈ ವಿಷಯವನ್ನ ಅಡ್ವಾನಿಯವ್ರಿಗೆ ತಿಳಿಸಿ, ಅಭಿನಂದಿಸಿದ್ದೇನೆ ಅಂತ ಹೇಳಿದ್ದಾರೆ. ಇನ್ನೊಂದೆಡೆ ಈ ಬಗ್ಗೆ ರಿಯಾಕ್ಟ್ ಮಾಡಿರೋ ಡಿಸಿಎಂ ಡಿಕೆ ಶಿವಕುಮಾರ್, ʻಅಡ್ವಾಣಿ ದೇಶದ ಹಿರಿಯ ರಾಜಕಾರಣಿ. ಅವ್ರಿಗೆ ಭಾರತ ರತ್ನ ನೀಡಿದ್ದಕ್ಕೆ ನಮ್ಮ ತಕರಾರೇನು ಇಲ್ಲ. ಆದ್ರೆ ಸಿದ್ಧಗಂಗೆಯ ಶಿವಕುಮಾರ ಸ್ವಾಮೀಜಿಯವರಿಗೂ ಮರಣೋತ್ತರವಾಗಿ ಭಾರತ ರತ್ನ ಕೊಡ್ಲಿʼ ಅಂತ ಕೇಂದ್ರ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.
-masthmagaa.com
Contact Us for Advertisement