ರಾಜ್ಯಕ್ಕೆ ಮೋದಿ-ಯೋಗಿ ಆಗಮನ! ಬೃಹತ್‌ ಸಮಾವೇಶದಲ್ಲಿ ಭಾಗಿ!

masthmagaa.com:

ರಾಜ್ಯದಲ್ಲಿ ದಿನೇ ದಿನೇ ಬಿಸಿಲಿನ ಜೊತೆಗೆ ವಿಧಾನಸಭಾ ಚುನಾವಣೆಯ ಕಾವು ಜಾಸ್ತಿಯಾಗ್ತಿದೆ. ಇದೀಗ ಪ್ರಧಾನಿ ಮೋದಿ ಹಾಗೂ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್‌ ಅವರು ರಾಜ್ಯಕ್ಕೆ ಆಗಮಿಸುತ್ತಿದ್ದು, ಚುನಾವಣೆ ಇನ್ನಷ್ಟು ಕಾವು ಪಡೆಯಲಿದೆ. ಮೇ 4 ರಂದು ಮೋದಿ ಉಡುಪಿಗೆ ಬರಲಿದ್ದು, ಬೃಹತ್‌ ಸಮಾವೇಶ ನಡೆಸಲಿದ್ದಾರೆ. ಇವರ ಜೊತೆಗೆ ಯೋಗಿ ಆದಿತ್ಯನಾಥ್‌ ಕೂಡ ಆಗಮಿಸುತ್ತಿದ್ದು, ಉಭಯ ನಾಯಕರು ಅಬ್ಬರದ ಪ್ರಚಾರ ನಡೆಸಲಿದ್ದಾರೆ ಅಂತ ತಿಳಿದು ಬಂದಿದೆ.

-masthmagaa.com

Contact Us for Advertisement

Leave a Reply