masthmagaa.com:
ಮಧ್ಯ ಪ್ರದೇಶದಲ್ಲಿ ನಡೆದ ಚುನಾವಣಾ ರ್ಯಾಲಿ ವೇಳೆ ಪ್ರಧಾನಿ ನರೇಂದ್ರ ಮೋದಿಯವ್ರು ಪಾಕಿಸ್ತಾನವನ್ನ ತೀವ್ರ ತರಾಟೆಗೆ ತಗೊಂಡಿದ್ದಾರೆ. ಎಲ್ಲೆಡೆ ಭಯೋತ್ಪಾದನೆ ಹೆಚ್ಚಿಸುತ್ತಿರೋ ಪಾಕ್…ಈಗ ಒಂದಿಷ್ಟು ಗೋದಿ ಹಿಟ್ಟು ಪಡೆಯೋಕೂ ಕಷ್ಟ ಪಡ್ತಿದೆ ಅಂತ ಹೇಳಿದ್ದಾರೆ. ಪಾಕ್ ಆರ್ಥಿಕ ಬಿಕ್ಕಟ್ಟಿನಲ್ಲಿದ್ರೂ ಭಯೋತ್ಪಾದನೆ ನಡೆಸೋಕೇನೂ ಕಮ್ಮಿಯಿಲ್ಲ ಅಂದಿದ್ದಾರೆ. ಆದ್ರೆ ಆ ಕಡೆ ಇಂಟ್ರಸ್ಟಿಂಗ್ ಅನ್ನೋ ರೀತಿ ಪಾಕಿಸ್ತಾನದಿಂದ ಮತ್ತೆ ಭಾರತಕ್ಕೆ ಸ್ನೇಹ ಸಂದೇಶ ಬಂದಿದೆ. ಈ ಸಲ ಪಾಕ್ನ ಪಂಜಾಬ್ ಮುಖ್ಯಮಂತ್ರಿ, ಪಾಕ್ ಪ್ರಧಾನಿ ಶೆಹಬಾಜ್ ಅವರ ಅಣ್ಣನ ಮಗಳು ಆಗಿರೋ ಮರ್ಯಮ್ ನವಾಜ್ ಭಾರತಕ್ಕೆ ಫ್ರೆಂಡ್ ರಿಕ್ವೆಸ್ಟ್ ಕಳಿಸಿದ್ದಾರೆ. ನೇಬರ್ಗಳ ಜೊತೆ ಅಥ್ವಾ ಅಕ್ಕಪಕ್ಕದಲ್ಲಿರೋ ರಾಷ್ಟ್ರಗಳ ಜೊತೆ ಕಿತ್ತಾಡ್ಬೇಡಿ. ಸ್ನೇಹದ ಬಾಗಿಲು ತೆಗೆಯಿರಿ… ನಿಮ್ಮ ಹೃದಯದ ಬಾಗಿಲು ತೆಗೀರಿ ಅಂತ ನಮ್ಮ ತಂದೆ ಹೇಳಿದ್ರು. ಸೋ ಭಾರತ ಜೊತೆ ಉತ್ತಮ ಸಂಬಂಧ ವೃದ್ಧಿಸೋದು ತುಂಬಾ ಒಳ್ಳೇದು ಅಂತ ಮರ್ಯಮ್ ನವಾಜ್ ಮಾತನಾಡಿದ್ದಾರೆ.
-masthmagaa.com
Contact Us for Advertisement