ಕಾಂಗ್ರೆಸ್‌ಗೆ ತಕ್ಕ ಪಾಠ ಕಲ್ಸಿ, NDA ಅಭ್ಯರ್ಥಿಗಳನ್ನ ಗೆಲ್ಲಿಸಿ: ಮೋದಿ!

masthmagaa.com:

ಇನ್ನು ಲೋಕಸಭೆ ಚುನಾವಣೆ ಸಂಬಂಧ ಪ್ರಧಾನಿ ಮೋದಿ ಬೆಂಗಳೂರು ಮತ್ತು ಚಿಕ್ಕಬಳ್ಳಾಪುರದಲ್ಲಿ ಪ್ರಚಾರ ನಡೆಸಿದ್ದಾರೆ. ಈ ವೇಳೆ ರಾಜ್ಯ ಕಾಂಗ್ರೆಸ್‌ ಸರ್ಕಾರದ ವಿರುದ್ದ ಹರಿಹಾಯ್ದಿದ್ದಾರೆ. ಕರ್ನಾಟಕದಲ್ಲಿ ನಮ್ಮ ಹೆಣ್ಣು ಮಕ್ಕಳ ಮೇಲೆ ಹಲ್ಲೆಗಳಾಗ್ತಿವೆ. ಬೀದಿಗಳಲ್ಲಿ ಸ್ಪೋಟಗಳು ಸಂಭವಿಸ್ತಿವೆ. ಭಜನೆ ಮಾಡ್ತಿದ್ದವರ ಮೇಲೆ ದಾಳಿಯಾಗ್ತಿವೆ. ಸುಂದರ ನಗರದ ಪರಿಕಲ್ಪನೆಯಿಂದ ಕೆಂಪೇಗೌಡರು ಬೆಂಗಳೂರನ್ನ ಕಟ್ಟಿದ್ರು. ಆದ್ರೆ ಈಗ ಬೆಂಗಳೂರು ಸಿಟಿಯ ವಾತಾವರಣ ಹದಗೆಟ್ಟಿದೆ. ಕಾಂಗ್ರೆಸ್ಸಿನವರು ಟ್ಯಾಕ್ಸ್‌ ಸಿಟಿಯನ್ನ ಟ್ಯಾಂಕರ್‌ ಸಿಟಿಯಾಗಿ ಮಾಡಿದ್ದಾರೆ ಅಂತ ಮೋದಿ ರಾಜ್ಯ ಸರ್ಕಾರದ ವಿರುದ್ದ ಗುಡುಗಿದ್ದಾರೆ. ಜೊತೆಗೆ ಕರ್ನಾಟಕದಲ್ಲಿ ಈ ಹಿಂದೆ ನಮ್ಮ ಬಿಜೆಪಿ ಸರ್ಕಾರ ಇದ್ದಾಗ ಕಿಸಾನ್ ಸಮ್ಮಾನ್‌ ಯೋಜನೆಯ ಹಣದ ಜತೆಗೆ ರಾಜ್ಯಸರ್ಕಾರದ ವತಿಯಿಂದ 2,000 ರೂ. ಸೇರಿಸಿ 4,000 ರೂಪಾಯಿಯನ್ನು ರೈತರಿಗೆ ನೀಡಲಾಗ್ತಿತ್ತು. ಆದ್ರೆ ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದಾಗಿನಿಂದ ಅದನ್ನ ಸ್ಥಗಿತ ಗೊಳಿಸಲಾಗಿದೆ. ಇದ್ರಿಂದ ಕಾಂಗ್ರೆಸ್‌ ರೈತ ವಿರೋಧಿ ಸರ್ಕಾರ ಅನ್ನೊದನ್ನ ಪ್ರೂವ್ ಮಾಡಿದೆ ಅಂತೇಳಿದಾರೆ. ಜೊತೆಗೆ ಕಳೆದ 10 ವರ್ಷಗಳಲ್ಲಿ SC-ST ಸಮುದಾಯಗಳ 25ಕೋಟಿ ಜನರನ್ನ ಬಡತನ ರೇಖೆಗಿಂತ ಮೇಲೆ ತಂದಿದ್ದೇವೆ. ಆದಿವಾಸಿ ಸಮುದಾಯವ್ರಿಗೆ ರಾಷ್ಟ್ರಪತಿ ಹುದ್ದೆ ನೀಡಲಾಗಿದೆ ಅಂತೇಳಿದ್ದಾರೆ. ಇದೇ ವೇಳೆ “ಭಾರತದಲ್ಲಿ ಮತ್ತು ಭಾರತದ ಹೊರಗಿರೋ ನಾಯಕರು ನನ್ನನ್ನ ಅಧಿಕಾರದಿಂದ ಕೆಳಗಿಳಿಸೋಕೆ ಪ್ರಯತ್ನ ಮಾಡ್ತಿದ್ದಾರೆ ಅಂತ ಮೋದಿ ಗಂಭೀರ ಆರೋಪ ಮಾಡಿದ್ದಾರೆ. ಈ ಮೂಲಕ ವಿದೇಶಿ ಶಕ್ತಿಗಳು ನನ್ನ ವಿರುದ್ದ ಕೆಲಸ ಮಾಡ್ತಿವೆ ಅಂತ ಹೇಳಿದ್ದಾರೆ. ಇನ್ನು ಸಮಾವೇಶದ ಟೈಮಲ್ಲಿ ಇಳಿ ವಯಸ್ಸಿನಲ್ಲಿ ಮಾಜಿ ಪ್ರಧಾನಿ ಹೆಚ್‌ಡಿ ದೇವೇಗೌಡರ ಬದ್ಧತೆ, ಉತ್ಸಾಹ ನಮಗೆಲ್ಲರಿಗೂ ಪ್ರೇರಣೆ ಅಂತ ಮೋದಿ ದೇವೇಗೌಡರನ್ನ ಹಾಡಿ ಹೊಗಳಿದ್ದಾರೆ. ಇನ್ನು ಬೆಂಗಳೂರಿನಲ್ಲಿ ಮೋದಿಯವರು ಸಂಚರಿಸುವಾಗ ಭದ್ರತಾ ಲೋಪ ಆಗಿದೆ. ಕಾಂಗ್ರೆಸ್‌ ನಾಯಕ ಮೊಹಮ್ಮದ್‌ ನಲಪಾಡ್‌ ಸೇರಿದಂತೆ ಕೈ ನಾಯಕರು ರಸ್ತೆಗೆ ನುಗ್ಗಿ ಮೋದಿ ಅವ್ರಿಗೆ ಚೊಂಬು ಪ್ರದರ್ಶನ ಮಾಡಿದ್ದಾರೆ. ಬಳಿಕ ಪೋಲಿಸರು ನಲಪಾಡ್‌ ಸೇರಿದಂತೆ ನಾಲ್ವರನ್ನ ವಶಕ್ಕೆ ಪಡೆದಿದ್ದಾರೆ.

-masthmagaa.com

Contact Us for Advertisement

Leave a Reply