masthmagaa.com:
ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿ ಮಾಡಿದ್ದ ದೇಶದ ಪಾರ್ಲಿಮೆಂಟ್ ಭದ್ರತಾ ಲೋಪಕ್ಕೆ ಸಂಬಂಧಿಸಿದಂತೆ ಬಿಜೆಪಿ ಸಂಸದ ಪ್ರತಾಪ್ ಸಿಂಹ ಕೊನೆಗೂ ಮೌನ ಮುರಿದಿದ್ದಾರೆ. ತಮ್ಮ ವಿರುದ್ಧ ಮಾಡಲಾಗ್ತಿರೋ ಆರೋಪದ ಕುರಿತು ಮಾತನಾಡಿರೋ ಅವರು. ʻನಾನು ದೇಶದ್ರೋಹಿನೋ, ದೇಶಪ್ರೇಮಿನೋ ಅನ್ನೋ ಬಗ್ಗೆ ಬೆಟ್ಟದ ಚಾಮುಂಡಿ ತಾಯಿ, ಕೊಡಗಿನ ಕಾವೇರಿ ತಾಯಿ, ನನ್ನ ಓದುಗರು ಮತ್ತು ಮೈಸೂರು-ಕೊಡಗಿನ ಜನ ಮುಂದಿನ ಲೋಕಸಭಾ ಎಲೆಕ್ಷನ್ನಲ್ಲಿ ತೀರ್ಮಾನ ಮಾಡ್ತಾರೆ. 2024ರಲ್ಲಿ ನಡೆಯಲಿರೋ ಲೋಕಸಭೆ ಚುನಾವಣೆಯಲ್ಲಿ ಜನರು ಈ ಬಗ್ಗೆ ಡಿಸೈಡ್ ಮಾಡ್ತಾರೆ. ನಾನೇನೆಂದು ಫೈನಲ್ ಆಗಿ ತೀರ್ಮಾನ ಮಾಡ್ಬೇಕಾದವ್ರು ನನ್ನ ಕ್ಷೇತ್ರದ ಜನರು. ಇದಕ್ಕೂ ಹೆಚ್ಚು ನಾನೇನು ಹೇಳೋದಿಲ್ಲʼ ಅಂತ ಪ್ರತಿಕ್ರಿಯೆ ನೀಡಿದ್ದಾರೆ. ಅಂದ್ಹಾಗೆ ಸಂಸತ್ತಿನ ಭದ್ರತಾ ಲೋಪವಾಗಿರೋ ಬೆನ್ನಲ್ಲೇ ಪ್ರತಾಪ್ ಸಿಂಹ ಅವ್ರು ದೇಶದ್ರೋಹಿ ಅಂತ ಬಿಂಬಿಸೋ ಪೋಸ್ಟರ್ ಒಂದನ್ನ ಹಾಕಿ ಪ್ರತಿಭಟಿಲಾಗಿತ್ತು. ಸಂಸತ್ ಒಳಗೆ ನುಗ್ಗಿದವರಿಗೆ ಪ್ರತಾಪ ಸಿಂಹ ಪಾಸ್ ಕೊಟ್ಟಿದ್ದಾರೆ ಅಂತ ಆರೋಪ ಮಾಡಿ ಪೋಸ್ಟ್ ಹಾಕಲಾಗಿತ್ತು. ಈ ರೀತಿ ಪೋಸ್ಟರ್ ಹಾಕಿರೋದಕ್ಕೆ ಇದೀಗ ಪ್ರತಾಪ್ ಸಿಂಹ ರಿಯಾಕ್ಟ್ ಮಾಡಿ ಈ ರೀತಿ ಹೇಳಿದ್ದಾರೆ.
-masthmagaa.com
Contact Us for Advertisement