masthmagaa.com:
ಒಡಿಶಾದ ಬದಾಮ್ಪುರ ರೈಲು ನಿಲ್ದಾಣಕ್ಕೆ ಮೂರು ಹೊಸ ರೈಲುಗಳ ಕಾರ್ಯಾರಂಭಕ್ಕೆ ರಾಷ್ಟ್ರಪತಿ ಚಾಲನೆ ನೀಡಿದ್ದಾರೆ. ಬದಾಮ್ಪಹಾರ್ನಿಂದಟಾಟಾ ನಗರ ಹಾಗೂ ಬದಾಮ್ಪಹಾರ್-ರೌರ್ಕೆಲಾ ವಿಕ್ಲಿ ಎಕ್ಸಪ್ರೆಸ್ ಮತ್ತು ಬದಾಮ್ಪಹಾರ್-ಶಾಲಿಮಾರ್ ವಿಕ್ಲಿ ಎಕ್ಸಪ್ರೆಸ್ ಟ್ರೇನ್ಗಳಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಚಾಲನೆ ನೀಡಿದ್ದಾರೆ. ವಿಶೇಷ ಅಂದ್ರೆ ಈ ಎಲ್ಲ ರೈಲುಗಳು ಮೂರ್ಮುರ ಸ್ವಗ್ರಾಮ ರಾಯ್ರಂಗಪುರ್ ಮೂಲಕ ಚಲಿಸಲಿಸಲಿವೆ. ಇಲ್ಲಿಯವೆರೆಗೂ ಒಂದೇ ಒಂದು ರೈಲನ್ನ ಕಾಣದ ರಾಷ್ಟ್ರಪತಿಗಳ ಸ್ವಗ್ರಾಮಕ್ಕೆ ಈ ಯೋಜನೆಯ ಮೂಲಕ ನೆರವಾಗಲಿದೆ. ನೂತನ ಶಾಲಿಮಾರ್ ಎಕ್ಸಪ್ರೆಸ್ನ 200 ಶಾಲಾ ಮಕ್ಕಳೊಂದಿಗೆ ಸ್ವಗ್ರಾಮ ರಾಯ್ರಂಗಪುರ್ವರೆಗೆ ರೈಲಿನಲ್ಲಿ 32ಕಿಮೀ ಪ್ರಯಾಣಿಸಿ ಯೋಜನೆಗೆ ಚಾಲನೆ ನೀಡಿದ್ದಾರೆ. ಇದೇ ಫಸ್ಟ್ ಟೈಮ್ ರಾಷ್ಟ್ರಪತಿ ಒಬ್ರು ಸಾಮಾನ್ಯ ಎಸಿ ಭೋಗಿಯಲ್ಲಿ ಪ್ರಯಾಣಿಸಿದ ಖ್ಯಾತಿಗೆ ಮುರ್ಮು ಭಾಜನರಾಗಿದ್ದಾರೆ. ಈ ವೇಳೆ ಬದಾಮ್ಪಹಾರ್ ರೈಲು ನಿಲ್ದಾಣದ ಮರು ಅಭಿವೃದ್ದಿ ಕಾಮಗಾರಿಗೆ ಶಂಕು ಸ್ಥಾಪನೆ ನೇರವೆರಿಸಿದ್ದಾರೆ.
-masthmagaa.com
Contact Us for Advertisement