masthmagaa.com:
ಮಹತ್ವದ ಬೆಳವಣಿಗೆಯಲ್ಲಿ 545 ಎಸ್ಐ ನೇಮಕಾತಿ ಅಕ್ರಮ ಪ್ರಕರಣಕ್ಕೆ ಸಂಬಂಧಟ್ಟಂತೆ ಇದೀಗ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ, ಬಸನಗೌಡ ಪಾಟೀಲ್ ಯತ್ನಾಳ್ ಸೇರಿ ಕೆಲವರಿಗೆ ಸಮನ್ಸ್ ಜಾರಿ ಮಾಡಲಾಗಿದೆ. ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಬಿ.ವೀರಪ್ಪ ಆಯೋಗದಿಂದ ಇವರಿಗೆ ಸಮನ್ಸ್ ನೀಡಲಾಗಿದೆ. ಹೆಚ್.ಡಿ. ಕುಮಾರಸ್ವಾಮಿ, ಯತ್ನಾಳ್, ಬಿಜೆಪಿಯ ಬಸವರಾಜ್ ಧಡೇಸಗೂರು, ಮಾಜಿ ಡಿಸಿಎಂ ಅಶ್ವತ್ಥ್ ನಾರಾಯಣ ಅವ್ರಿಗೆ ಸಮನ್ಸ್ ಜಾರಿ ಮಾಡಲಾಗಿದೆ. ಜೊತೆಗೆ ಈ ಸಂಬಂಧ ಎವಿಡೆನ್ಸ್ಗಳಿದ್ರೆ ಅದನ್ನ ಹಾಜರು ಪಡಿಸಿ ಅಂತ ತಿಳಿಸಲಾಗಿದೆ. ಅಂದ್ಹಾಗೆ ಇವ್ರೆಲ್ಲಾ ಪರೀಕ್ಷಾ ಅಕ್ರಮದ ಕುರಿತು ತಮ್ಮ ಬಳಿ ಎವಿಡೆನ್ಸ್ ಇದೆ ಅಂತ ಹೇಳಿಕೊಂಡಿದ್ರು. ಆದ್ರಿಂದ ಇವ್ರೆಲ್ರನ್ನ ವಿಚಾರಣೆ ಮಾಡ್ಬೇಕು ಅಂತ ದೂರುಗಳು ಬಂದಿದ್ವು. ಈ ಬೆನ್ನಲ್ಲೇ ಆಯೋಗ ಇವ್ರಿಗೆ ಸಮನ್ಸ್ ನೀಡಿದೆ.
-masthmagaa.com
Contact Us for Advertisement