masthmagaa.com:
ಚುನಾವಣಾ ಪ್ರಚಾರದ ವೇಳೆ ಪ್ರಣಾಳಿಕೆಯನ್ನ ರಿಲೀಸ್ ಮಾಡಿದ್ದ ಕಾಂಗ್ರೆಸ್ ಬಜರಂಗದಳವನ್ನ PFI ಸಂಘಟನೆಗೆ ಹೋಲಿಕೆ ಮಾಡಲಾಗಿತ್ತು. ಇದೀಗ ಇದಕ್ಕೆ ಸಂಬಂಧಿಸಿದಂತೆ AICC ಅಧ್ಯಕ್ಷ ಮಲ್ಲಿಕಾರ್ಜುನ ಅವ್ರಿಗೆ ಪಂಜಾಬ್ನ ಸಂಗ್ರೂರ್ ಕೋರ್ಟ್ ಇಂದು ಸಮನ್ಸ್ ಜಾರಿ ಮಾಡಿದೆ. ʻಬಜರಂಗದಳ ಹಿಂದೂಸ್ತಾನ್ʼನ ಮುಖ್ಯಸ್ಥ ಹಿತೇಶ್ ಭಾರದ್ವಾಜ್ ಅವರು ನೀಡಿರುವ ದೂರಿನ ಆಧಾರದ ಮೇಲೆ ಕೋರ್ಟ್ ಸಮನ್ಸ್ ನೀಡಿದೆ. ಅಂದ್ಹಾಗೆ ಬಜರಂಗದಳಕ್ಕೆ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಅಪಮಾನ ಮಾಡಿದೆ ಅಂತ ಆರೋಪಿಸಿ, 100 ಕೋಟಿ ಮಾನನಷ್ಟ ಮೊಕದ್ದಮೆಯನ್ನ ಹಿತೇಶ್ ಹೂಡಿದ್ರು.
-masthmagaa.com
Contact Us for Advertisement