masthmagaa.com:
ಸಮಾಜದಲ್ಲಿ ಬೆಂಕಿ ಇಡುವ ಕೆಲಸ ಮಾಡ್ತಿರೋ ಪ್ರಮೋದ್ ಮುತಾಲಿಕ್ ಅಂತವರನ್ನ ಮೊದಲು ಒದ್ದು ಒಳಗೆ ಹಾಕಬೇಕು. ಆಗ ಎಲ್ಲವೂ ಸರಿ ಹೋಗುತ್ತೆ ಅಂತ ಮಾಜಿ ಸಿಎಂ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರೋ ಮುತಾಲಿಕ್, ನಿಮ್ಗೆ ಹುಚ್ಚು ಹಿಡಿದಿದೆ. ನೀವು ಹೀಗೆ ಹೇಳಿದ್ರೆ ಮುಸ್ಲಿಮರು ವೋಟ್ ಹಾಕ್ತಾರೆ ಅನ್ಕೋಬೇಡಿ ಎಂದಿದ್ಧಾರೆ. ಜೊತೆಗೆ ಧ್ವನಿವರ್ಧಕ ಬಗ್ಗೆ ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಬೇಕು. ಆಗ ಎಲ್ಲರಿಗೂ ರೂಲ್ಸ್ ಏನು ಅನ್ನೋದು ಗೊತ್ತಾಗುತ್ತೆ ಅಂತಾನೂ ಮುತಾಲಿಕ್ ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.
-masthmagaa.com
Contact Us for Advertisement