ಸರ್ಕಾರಿ ಬಂಗಲೆ ವಿವಾದ ಹಿನ್ನಲೆಯಲ್ಲಿ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ ರಾಘವ್‌ ಚಡ್ಡಾ!

masthmagaa.com:

ಸರ್ಕಾರಿ ಬಂಗಲೆಯಿಂದ ಹೊರಹೋಗುವಂತೆ ನೀಡಲಾದ ಟ್ರಾಯಲ್‌ ಕೋರ್ಟ್‌ ಆದೇಶಕ್ಕೆ ಆಮ್‌ ಆದ್ಮಿ ಪಾರ್ಟಿ ಸಂಸದ ರಾಘವ್‌ ಚಡ್ಡಾ ಸವಾಲೊಡ್ಡಿದ್ದಾರೆ. ಈ ವಿಚಾರವಾಗಿ ಸುಪ್ರೀಂ ಕೋರ್ಟ್‌ಗೆ ರಾಘವ್‌ ಚಡ್ಡಾ ಕಾಲಿಟ್ಟಿದ್ದಾರೆ. ಆಗಸ್ಟ್‌ 11 ರಂದು ನಿಯಮಗಳನ್ನು ಉಲ್ಲಂಘಿಸಿದ ಆರೋಪದ ಮೇಲೆ ರಾಘವ್‌ ಚಡ್ಡಾ ಅವರನ್ನು ರಾಜ್ಯಸಭೆಯಿಂದ ವಜಾಗೊಳಿಸಲಾಗಿತ್ತು. ಇದರೊಂದಿಗೆ ರಾಘವ್‌ ಚಡ್ಡಾರವರಿಗೆ ನೀಡಲಾಗಿದ್ದ ಸರ್ಕಾರಿ ಬಂಗಲೆಯಲ್ಲಿ ವಾಸಿಸುವ ಅನುಮತಿಯನ್ನು ಕೂಡ ರದ್ದುಗೊಳಿಸಲಾಗಿತ್ತು. ಈ ಕುರಿತಾಗಿ ಹೈ ಕೋರ್ಟ್‌ ಮೆಟ್ಟಿಲೇರಿದ್ದ ರಾಘವ್‌ ಚಡ್ಡಾ ಇದೀಗ ಸುಪ್ರೀಂ ಕೋರ್ಟ್‌ ಮೊರೆ ಹೋಗಿದ್ದಾರೆ.

-masthmagaa.com

Contact Us for Advertisement

Leave a Reply