masthmagaa.com:
ದೇಶದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗ್ತಿರೋ ಸಂಪತ್ತು ಮರುಹಂಚಿಕೆ, ಪಿತ್ರಾರ್ಜಿತ ತೆರಿಗೆ ವಿಚಾರವಾಗಿ ಇದೀಗ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ (RBI) ಮಾಜಿ ಗವರ್ನರ್ ರಘುರಾಮ್ ರಾಜನ್ ರಿಯಾಕ್ಟ್ ಮಾಡಿದ್ದಾರೆ. ʻನಾವು ಮೇಲೆ ಹೋಗೋಕೆ…ಬೆಳೆಯೋಕೆ ಟ್ರೈ ಮಾಡ್ಬೇಕು. ಅದನ್ನ ಬಿಟ್ಟು ಸಕ್ಸಸ್ ಕಂಡವ್ರನ್ನ ಕೆಳಗೆ ತರಬಾರದುʼ ಅಂತ ಈವೆಂಟ್ ಒಂದ್ರಲ್ಲಿ ಹೇಳಿದ್ದಾರೆ. ಜೊತೆಗೆ ಎಲ್ಲರನ್ನ ಒಳಗೊಂಡಂತೆ ಇನ್ಕ್ಲೂಸಿವ್ ಗ್ರೌತ್ನಿಂದ ಬೆಳವಣಿಗೆಯ ವೇಗ ಜಾಸ್ತಿಯಾಗುತ್ತೆ, ಕೇವಲ ಶ್ರೀಮಂತರಿಗೆ ಟ್ಯಾಕ್ಸ್ ಹಾಕೋದು ಪರಿಹಾರ ಅಲ್ಲ ಅಂದಿದ್ದಾರೆ… ಅಂದ್ಹಾಗೆ ಇತ್ತೀಚೆಗಷ್ಟೇ ಕಾಂಗ್ರೆಸ್ ನಾಯಕ ಸ್ಯಾಮ್ ಪಿತ್ರೋಡಾ ಅವ್ರು ಅಮೆರಿಕದ ಪಿತ್ರಾರ್ಜಿತ ತೆರಿಗೆ ವಿಧಿಸೋ ಕಾನೂನಿನ ಬಗ್ಗೆ ಹೇಳಿಕೆ ನೀಡಿದ್ರು.
-masthmagaa.com
Contact Us for Advertisement