masthmagaa.com:
ಇತ್ತೀಚೆಗೆ ತೆಲಂಗಾಣ ರ್ಯಾಲಿ ವೇಳೆ ಪ್ರಧಾನಿ ಮೋದಿಯವ್ರು, ʻರಾಹುಲ್ ಗಾಂಧಿ ಈಗೀಗ ಅಂಬಾನಿ ಮತ್ತು ಅದಾನಿಯನ್ನ ನಿಂದಿಸೋದು ನಿಲ್ಲಿಸಿದ್ದಾರೆ. ಏನೂ… ಅಂಬಾನಿ ಮತ್ತು ಅದಾನಿಯಿಂದ ಕಾಂಗ್ರೆಸ್ಗೆ ಟೆಂಪೋನಲ್ಲಿ ಲೋಡ್ಗಟ್ಟಲೆ ಕಪ್ಪು ಹಣ ಸಿಕ್ತಿದ್ಯಾ…ಏನ್ ಕಥೆ?ʼ ಅಂತ ಪ್ರಶ್ನಿಸಿದ್ರು. ಇದಕ್ಕೆ ವಿಡಿಯೋ ಮೆಸೇಜ್ ಮೂಲಕ ರಿಯಾಕ್ಟ್ ಮಾಡಿರೋ ರಾಹುಲ್ ಗಾಂಧಿ, ʻನರೇಂದ್ರ ಮೋದಿಯವ್ರು ವೈಯಕ್ತಿಕ ಅನುಭವದ ಮೇಲೆ ಹೇಳಿಕೆ ನೀಡಿರೋ ಹಾಗಿದೆ. ಯಾಕಂದ್ರೆ ಮೋದಿಯವ್ರು, ಅದಾನಿ ಮತ್ತು ಅಂಬಾನಿ ಬಗ್ಗೆ ಪಬ್ಲಿಕ್ನಲ್ಲಿ ಈ ರೀತಿ ಮಾತನಾಡಿರೋದು ಇದೇ ಮೊದಲು. ಒಂದ್ ಕೆಲಸ ಮಾಡಿ, ಅಂಬಾನಿ ಅದಾನಿ ಇರುವಲ್ಲಿಗೆ CBI ಮತ್ತು ED ಅಧಿಕಾರಿಗಳನ್ನ ಕಳಿಸಿ ತನಿಖೆ ನಡೆಸೋಕೆ ಹೇಳಿ…. ಇದಕ್ಕೆಲ್ಲಾ ಹೆದರಬೇಡಿʼ ಅಂತ ಮೋದಿಯವ್ರ ವಿರುದ್ದ ರಾಹುಲ್ ವಾಗ್ದಾಳಿ ಮಾಡಿದ್ದಾರೆ.
ಈ ನಡುವೆ ಇದೀಗ ಪ್ರಧಾನಿ ನರೇಂದ್ರ ಮೋದಿ ಹಾಗೂ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಧ್ಯೆ ಪಬ್ಲಿಕ್ ಡಿಬೇಟ್ ನಡೆಸೋಕೆ ಆಹ್ವಾನ ನೀಡಲಾಗಿದೆ. ಸುಪ್ರೀಂ ಕೋರ್ಟ್ನ ಮಾಜಿ ನ್ಯಾಯಮೂರ್ತಿಗಳಾದ ಬಿ ಲೋಕೂರ್, ದೆಹಲಿ ಹೈಕೋರ್ಟ್ನ ಮಾಜಿ ನ್ಯಾಯಧೀಶರಾದ ಎಪಿ ಶಾ ಮತ್ತು ಖ್ಯಾತ ಪತ್ರಕರ್ತರಾದ ಎನ್ ರಾಮ್ ಅವ್ರು ಸೇರಿ ಮೋದಿ ಮತ್ತು ರಾಹುಲ್ರಿಗೆ ಬನ್ನಿ ಓಪನ್ ಡಿಬೇಟ್ ಮಾಡಿ ಈ ಆಹ್ವಾನ ನೀಡಿದ್ದಾರೆ.
-masthmagaa.com
Contact Us for Advertisement