masthmagaa.com:
ಅಸ್ಸಾಂನ ಗುವಾಹಟಿಯಲ್ಲಿ ಕಾಂಗ್ರೆಸ್ನ ಭಾರತ್ ಜೋಡೋ ನ್ಯಾಯ ಯಾತ್ರೆ ವೇಳೆ ಸ್ವಲ್ಪ ಉದ್ವಿಗ್ನತೆ ಉಂಟಾಗಿತ್ತು. ಅಲ್ಲದೆ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ನ ಕೆಲ ನಾಯಕರ ವಿರುದ್ಧ ಅಸ್ಸಾಂ ಪೊಲೀಸರು ಕೇಸ್ ದಾಖಲಿಸಿದ್ರು. ಇದೀಗ ಈ ವಿರುದ್ದ ಧ್ವನಿ ಎತ್ತಿರೋ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಗೃಹ ಸಚಿವ ಅಮಿತ್ ಶಾ ಅವ್ರಿಗೆ ಪತ್ರ ಬರೆದಿದ್ದಾರೆ. ಕಾಂಗ್ರೆಸ್ ಯಾತ್ರೆ ವೇಳೆ ಅಸ್ಸಾಂನಲ್ಲಿ ರಾಹುಲ್ ಗಾಂಧಿಯವ್ರಿಗೆ ಭದ್ರತಾ ಸಮಸ್ಯೆಗಳು ಎದುರಾಗಿದ್ವು, ಆದ್ರಿಂದ ಪಕ್ಷದ ನಾಯಕರಿಗೆ ಸರಿಯಾದ ಭದ್ರತೆ ನೀಡಿ ಅಂತ ಕೇಳ್ಕೊಂಡಿದ್ದಾರೆ. ʻಈ ರೀತಿ ಹಲವು ಬಾರಿ ಅಸ್ಸಾಂ ಪೊಲೀಸ್ ರಾಹುಲ್ ಗಾಂಧಿಯವ್ರಿಗೆ ಸೂಕ್ತವಾದ ಸೆಕ್ಯುರಿಟಿ ಒದಗಿಸುವಲ್ಲಿ ಎಡವಿದ್ದಾರೆ. ರಾಹುಲ್ ಗಾಂದಿಯವ್ರು Z+ ಸೆಕ್ಯುರಿಟಿಗೆ ಅರ್ಹರಾಗಿದ್ದಾರೆʼ ಅಂತ ಖರ್ಗೆ ಲೆಟರ್ನಲ್ಲಿ ಉಲ್ಲೇಖಿಸಿದ್ದಾರೆ.
-masthmagaa.com
Contact Us for Advertisement