masthmagaa.com:
ಹೋಳಿ ಹಬ್ಬದ ಪ್ರಯುಕ್ತ ಭಾರತದ ರಕ್ಷಣಾ ಸಚಿವ ರಾಜ್ನಾಥ್ ಸಿಂಗ್ ಲಡಾಖ್ನ ಲೇಹ್ ನಗರ ತಲುಪಿದ್ದಾರೆ. ಭಾರತೀಯ ಸೇನಾ ಸಿಬ್ಬಂದಿಯೊಂದಿಗೆ ಹೋಳಿ ಆಚರಿಸಿದ್ದಾರೆ. ಈ ವೇಳೆ ಮಾತನಾಡಿದ ಅವ್ರು ಸೈನಿಕರ ಶೌರ್ಯ ಮತ್ತು ಕಮಿಟ್ಮೆಂಟ್ನ್ನ ಹಾಡಿ ಹೊಗಳಿದ್ದಾರೆ. ʻದೆಹಲಿ ರಾಜಕೀಯ ರಾಜಧಾನಿ, ಮುಂಬೈ ಆರ್ಥಿಕತೆಯ ರಾಜಧಾನಿ, ಬೆಂಗಳೂರು ಟೆಕ್ನಾಲಜಿಯ ರಾಜಧಾನಿ. ಆದ್ರೆ ಲಡಾಖ್ ಮಾತ್ರ ಶೌರ್ಯ ಮತ್ತು ಪರಾಕ್ರಮದ ರಾಜಧಾನಿ. ಲಡಾಖ್ ಸಾಮಾನ್ಯವಾದ ಪ್ರದೇಶವಲ್ಲ. ಇಲ್ಲಿ ಸಿಯಾಚಿನ್ ಇದೆ…ಕಾರ್ಗಿಲ್ ಇದೆ…ಭಾರತಾಂಬೆ ನೆಲೆಸಿದ್ದಾಳೆʼ ಅಂದಿದ್ದಾರೆ.
-masthmagaa.com
Contact Us for Advertisement