masthmagaa.com:
ಭಗವಾನ್ ಶ್ರೀರಾಮ ಕೇವಲ ಹಿಂದೂಗಳಿಗಷ್ಟೇ ದೇವರಲ್ಲ. ಅವರಲ್ಲಿ ನಂಬಿಕೆ ಇಡೋ ಪ್ರತಿಯೊಬ್ಬರಿಗೂ ಅವರು ದೇವರು. ಜನರಿಗೆ ಸರಿಯಾದ ದಾರಿಯನ್ನ ತೋರಿಸೋಕೆ ಅಲ್ಲಾ ದೇವರು ಶ್ರೀರಾಮರನ್ನ ಕಳಿಸಿದ್ದಾರೆ ಅಂತ ಜಮ್ಮು-ಕಾಶ್ಮೀರದ ಮಾಜಿ ಸಿಎಂ ಫಾರೂಕ್ ಅಬ್ದುಲ್ಲಾ ಹೇಳಿದ್ದಾರೆ. ಉದಯಪುರದಲ್ಲಿ ರ್ಯಾಲಿ ಉದ್ದೇಶಿಸಿ ಮಾತನಾಡಿದ ಫಾರೂಕ್ ʻಬಿಜೆಪಿಯವರು ಅಧಿಕಾರದಲ್ಲಿ ಉಳಿಯಲು ರಾಮನ ಹೆಸರನ್ನು ಬಳಸುತ್ತಿದ್ದಾರೆ. ಆದರೆ ರಾಮ ಕೇವಲ ಹಿಂದೂಗಳ ದೇವರಲ್ಲ. ಈ ಕಲ್ಪನೆಯನ್ನ ನಿಮ್ಮ ಮನಸ್ಸಿನಿಂದ ಕಿತ್ತು ಹಾಕಿ. ಮುಸ್ಲಿಂ, ಕಿಶ್ಚಿಯನ್, ಅಮೆರಿಕನ್, ರಷ್ಯನ್ ಯಾರೇ ಆಗಿರಲಿ, ಅವರ ಮೇಲೆ ನಂಬಿಕೆಯಿರುವ ಪ್ರತಿಯೊಬ್ಬರಿಗೂ ಆತ ದೇವರಾಗುತ್ತಾರೆ ಅಂತ ಫಾರೂಕ್ ಹೇಳಿದ್ದಾರೆ. ಇದೇ ವೇಳೆ ಪಾಕ್ನ ಸಾಹಿತಿಯೊಬ್ರ ಬರಹವನ್ನ ಉಲ್ಲೇಖಿಸಿ, ರಾಮರನ್ನ ಅಲ್ಲಾರೇ ಕಳುಹಿಸಿದ್ದಾರೆ ಅಂತ ಹೇಳಿದ್ದಾರೆ.
-masthmagaa.com
Contact Us for Advertisement