ನೂಪುರ್‌ ಪ್ರಕರಣ: ಉತ್ತರ ಪ್ರದೇಶದಲ್ಲಿ 227 ಮಂದಿ ಆರೋಪಿಗಳ ಬಂಧನ..!

masthmagaa.com:

ನಿನ್ನೆ ದೇಶಾದ್ಯಂತ ನಡೆದ ಪ್ರತಿಭಟನೆಯೇ ಒಂದು ತೂಕವಾದ್ರೆ ಇತ್ತ ಉತ್ತರ ಪ್ರದೇಶದ್ದೇ ಇನ್ನೊಂದು ತೂಕ. ಅಷ್ಟರ ಮಟ್ಟಿಗೆ ಅಲ್ಲಿ ಹಿಂಸಾಚಾರ ಉಂಟಾಗಿತ್ತು. ಹಲವು ನಗರಗಳಲ್ಲಿ ಪ್ರತಿಭಟನೆ ಉಗ್ರರೂಪಕ್ಕೆ ತಿರುಗಿ ಕಲ್ಲು ತೂರಾಟ, ಬೆಂಕಿ ಹಚ್ಚೋದು ಎಲ್ಲಾ ಆಗಿತ್ತು. ಈ ವೇಳೆ ಪೊಲೀಸರು ಕೂಡ ಭರ್ಜರಿ ಕಾರ್ಯಾಚರಣೆ ಮಾಡಿದ್ದು 227 ಮಂದಿ ಗಲಭೆಕೋರರನ್ನ ಅರೆಸ್ಟ್‌ ಮಾಡಿದ್ದಾರೆ. ಪ್ರಯಾಗ್‌ರಾಜ್‌ನಲ್ಲಿ68, ಹತ್ರಾಸ್‌ನಲ್ಲಿ50, ಶಹರಾನ್‌ಪುರದಲ್ಲಿ 48, ಅಂಬೇಡ್ಕರ್‌ ನಗರದಲ್ಲಿ28, ಮೊರಾದಾಬಾದ್‌ನಲ್ಲಿ25 ಹಾಗೂ ಫಿರೋಜಾಬಾದ್‌ನಲ್ಲಿ 8 ಮಂದಿಯನ್ನ ವಶಕ್ಕೆ ಪಡೆಯಲಾಗಿದೆ. ಇತ್ತ ನೂಪುರ್‌ ಹೇಳಿಕೆಯ ಮೊದಲ ಕಿಡಿ ಹೊತ್ತಿಕೊಂಡ ಕಾನ್ಪುರದಲ್ಲಿ ಒಂದು ವಾರದ ಬಳಿಕ ಕ್ರಮ ತೆಗೆದುಕೊಳ್ಳಲಾಗಿದೆ. ಗಲಭೆಯ ಪ್ರಮುಖ ಆರೋಪಿ ಅಂತ ಹೇಳಲಾಗ್ತಿರೋ ಸ್ಥಳೀಯ ಮುಸ್ಲಿಂ ನಾಯಕ ಜಾಪರ್‌ ಆಯತ್‌ ಹಶ್ಮಿಗೆ ಸೇರಿದ ಆಸ್ತಿಗಳನ್ನ ಯೋಗಿ ಸರ್ಕಾರದ ಬುಲ್ಡೋಜರ್‌ಗಳು ನೆಲಸಮಮಾಡಿವೆ ಅಂತ ವರದಿಯಾಗಿದೆ.

-masthmagaa.com

Contact Us for Advertisement

Leave a Reply