masthmagaa.com:
ಪಾಕ್ ಪರ ಘೋಷಣೆ ಕೂಗಿದ ಕೇಸ್ನ ವಿಚಾರವಾಗಿ ಆರೋಪಿ ಮೊಹಮ್ಮದ್ ನಾಶಿಪುಡಿಯನ್ನ 14 ದಿನ ನ್ಯಾಯಾಂಗ ಬಂಧನದಲ್ಲಿಡುವಂತೆ ಬೆಂಗಳೂರಿನ 39ನೇ ACMM ಕೋರ್ಟ್ ಆದೇಶ ನೀಡಿದೆ. ಕಳೆದ ಒಂದು ವಾರದಿಂದ ಪೋಲಿಸರ ವಶದಲ್ಲಿದ್ದ ನಾಶಿಪುಡಿಯನ್ನ ಪೋಲಿಸ್ರು ಕೋರ್ಟ್ಗೆ ಹಾಜರು ಪಡಿಸಿದ ಬೆನ್ನಲ್ಲೆ ಕೋರ್ಟ್ ಈ ಆದೇಶ ನೀಡಿದೆ. ಇನ್ನು ಪಾಕ್ ಪರ ಘೋಷಣೆ ಕೇಸ್ನ ತನಿಖೆ ಪೂರ್ಣಗೊಳ್ಳೊವರೆಗೂ ರಾಜ್ಯಸಭಾ ಸದಸ್ಯನಾಗಿ ನಾಸೀರ್ ಹುಸೇನ್ಗೆ ಅಧಿಕಾರ ಸ್ವೀಕರಿಸಲು ಅವಕಾಶ ನೀಡ್ಬಾರ್ದು. ಹೀಗಂತ ರಾಜ್ಯದ ನಿವೃತ್ತ IAS ಹಾಗೂ IPS ಅಧಿಕಾರಿಗಳು ಉಪರಾಷ್ಟ್ರಪತಿ ಅವ್ರಿಗೆ ಪತ್ರ ಬರದು ಮನವಿ ಮಾಡಿದ್ದಾರೆ. ಇತ್ತೀಚಿಗೆ ಬಿಜೆಪಿ ರಾಜ್ಯಾಧ್ಯಕ್ಷ BY ವಿಜಯೇಂದ್ರ ಕೂಡ ಈ ವಿಚಾರವಾಗಿ ಉಪರಾಷ್ಟ್ರಪತಿ ಅವ್ರಿಗೆ ಪತ್ರ ಬರೆದಿದ್ರು. ಅದ್ರ ಬೆನ್ನಲ್ಲೆ ಈ ಬೆಳವಣಿಗೆ ನಡೆದಿದೆ.
-masthmagaa.com
Contact Us for Advertisement