masthmagaa.com:
ಭಾರತ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮ ಡಬಲ್ ಸೆಂಚುರಿ ಬಾರ್ಸೋದ್ರಲ್ಲಿ ವರ್ಲ್ಡ್ ಫೇಮಸ್ ಆಗಿರೋದು ಗೊತ್ತೇ ಇದೆ. ನಿನ್ನೆ ಸಹ ರೋಹಿತ್ ಒಂದು ಡಬಲ್ ಸೆಂಚುರಿ ಬಾರ್ಸಿದ್ದಾರೆ. ಆದ್ರೆ ಕ್ರಿಕೆಟ್ ಗ್ರೌಂಡ್ನಲ್ಲಲ್ಲ, ಮುಂಬೈ-ಪುಣೆ ಎಕ್ಸ್ಪ್ರೆಸ್ ವೇ ನಲ್ಲಿ. ಇಂದು ಪುಣೆನಲ್ಲಿ ನಡೆಯಲಿರೋ ಬಾಂಗ್ಲಾ ವಿರುದ್ಧದ ನಾಲ್ಕನೇ ವರ್ಲ್ಡ್ಕಪ್ ಪಂದ್ಯದ ಸಲುವಾಗಿ ಟೀಮ್ ಸೇರಿಕೊಳ್ಳೋಕೆ ಬೈ-ರೋಡ್ ಬರುತ್ತಿದ್ರು. ಈ ವೇಳೆ ರೋಹಿತ್ ಗಂಟೆಗೆ 215 ಕಿಲೋಮೀಟರ್ ಸ್ಪೀಡ್ನಲ್ಲಿ ತಮ್ಮ ಲ್ಯಾಂಬೊರ್ಗಿನಿ ಉರುಸ್ ಕಾರನ್ನ ಓಡಿಸಿ ಫೈನ್ ಕೂಡ ಕಟ್ಟಿದ್ದಾರೆ. ರೋಹಿತ್ ಪುಣೆ ತಲುಪುತ್ತಲೇ ಟ್ರಾಫಿಕ್ ಡಿಪಾರ್ಟ್ಮೆಂಟ್ನವ್ರು ಮೂರು ಟ್ರಾಫಿಕ್ ಚಲನ್ಗಳ್ನ ರೋಹಿತ್ಗೆ ಕೊಟ್ಟಿದ್ದಾರೆ. ಅಂದ್ಹಾಗೆ ವರ್ಲ್ಡ್ಕಪ್ ನಡೀತಿರೋ ಈ ಸಮಯದಲ್ಲಿ ರೋಹಿತ್ ಸೇಫ್ಟಿಗೆ ಪ್ರಾಮುಖ್ಯತೆ ಕೊಟ್ಟು ಟೀಮ್ ಬಸ್ಸಲ್ಲಿ ಹೋಗೋದ್ ಬಿಟ್ಟು ಕಾರಲ್ಲಿ ಯಾಕೆ ಹೋದ್ರು ಅನ್ನೋದು ಗೊತ್ತಾಗಿಲ್ಲ. ಹೀಗಾಗ್ಲೆ ರಿಷಬ್ ಪಂತ್ ಓವರ್ಸ್ಪೀಡ್ನಿಂದಾಗಿ ಅಪಘಾತಕ್ಕೀಡಾಗಿ ಬದುಕಿ ಉಳ್ಕೊಂಡಿದ್ದೇ ಹೆಚ್ಚು. ಈಗ ನಾಯಕನಾಗಿ ಜವಾಬ್ದಾರಿ ಸ್ಥಾನದಲ್ಲಿರೋ ರೋಹಿತ್ ಕೂಡ ಇಂತ ಸರ್ಕಸ್ ಮಾಡಿದ್ದಾರೆ.
-masthmagaa.com
Contact Us for Advertisement