masthmagaa.com:
ಲಾವೋಸ್ನಲ್ಲಿ ಒಳ್ಳೆ ಜಾಬ್ ಕೊಡಿಸೋ ಮೋಸದ ಜಾಲಕ್ಕೆ ಸಿಲುಕಿಕೊಂಡಿರೋ 17 ಭಾರತೀಯರನ್ನ ಇದೀಗ ರಕ್ಷಿಸಲಾಗಿದೆ. ಇವ್ರು ಈಗ ತಮ್ಮ ತಾಯ್ನಾಡಿಗೆ ವಾಪಾಸ್ ಆಗ್ತಿದ್ದಾರೆ ಅಂತ ವಿದೇಶಾಂಗ ಸಚಿವ ಎಸ್. ಜೈಶಂಕರ್ ಮಾಹಿತಿ ನೀಡಿದ್ದಾರೆ. ಈ ವೇಳೆ ಲಾವೋಸ್ನಲ್ಲಿರೋ ಭಾರತೀಯ ರಾಯಭಾರಿಯ ಶ್ರಮವನ್ನ ಜೈಶಂಕರ್ ಶ್ಲಾಘಿಸಿದ್ದಾರೆ. ಜೊತೆಗೆ, ʻಪ್ರಧಾನಿ ಮೋದಿಯವ್ರ ಗ್ಯಾರಂಟಿ ದೇಶದಲ್ಲಿರೋರಿಗೆ ಮತ್ತು ವಿದೇಶಗಳಲ್ಲಿರೋ ಎಲ್ಲರಿಗೂ ವರ್ಕ್ ಆಗುತ್ತೆʼ ಅಂತ ತಮ್ಮ ಸರ್ಕಾರವನ್ನೂ ಹೊಗಳಿದ್ದಾರೆ. ಅಷ್ಟೇ ಅಲ್ದೇ ಇತ್ತೀಚೆಗೆ ಇದೇ ರೀತಿ ಒಳ್ಳೆ ಕೆಲಸದ ಆಸೆ ತೋರ್ಸಿ ಭಾರತೀಯರು ಕಾಂಬೋಡಿಯಾದಲ್ಲಿ ಮೋಸ ಹೋಗಿರೋ ಬಗ್ಗೆ ಎಚ್ಚರಿಕೆ ನೀಡಿದ್ದಾರೆ. ಕೆಲಸ ನೀಡೋರ ಬ್ಯಾಕ್ಗ್ರೌಂಡ್ನ್ನ ಸರಿಯಾಗಿ ಚೆಕ್ ಮಾಡಿ ಅಂತೇಳಿದ್ದಾರೆ.
-masthmagaa.com
Contact Us for Advertisement