masthmagaa.com:
ಭಾರತದಲ್ಲಿರೋ ಹಿಂದು ದಂಪತಿ ನಾಲ್ವರು ಮಕ್ಕಳನ್ನ ಹೆರಬೇಕು. ಇದರಲ್ಲಿ ಇಬ್ಬರನ್ನ ದೇಶಕ್ಕೋಸ್ಕರ ನೀಡ್ಬೇಕು ಅಂತ ಸಾದ್ವಿ ರಿತಂಬರ ಹೇಳಿಕೆ ನೀಡಿದ್ದಾರೆ. ಉತ್ತರ ಪ್ರದೇಶದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಈ ಬಗ್ಗೆ ಮಾತನಾಡಿದ ಅವ್ರು ಹಿಂದು ಸಮಾಜವನ್ನ ಕೆಲ ಭಯೋತ್ಪಾದಕ ಶಕ್ತಿಗಳು ಡಿವೈಡ್ ಮಾಡೋಕೆ ಹವಣಿಸ್ತಾಯಿವೆ. ನಾನು ದಯವಿಟ್ಟು ಹಿಂದೂ ದಂಪತಿಗಳ ಬಳಿ ಕೇಳ್ಕೋತ್ತೀನಿ. ಎಲ್ಲರೂ ನಾಲ್ವರು ಮಕ್ಕಳನ್ನ ಹೊಂದಬೇಕು. ಇಬ್ಬರನ್ನ ದೇಶಕ್ಕಾಗಿ ನೀಡ್ಬೇಕು. ಭಾರತ ಶೀಘ್ರದಲ್ಲೇ ಹಿಂದೂ ರಾಷ್ಟ್ರ ಆಗಲಿದೆ ಅಂತ ಹೇಳಿಕೆ ನೀಡಿದ್ದಾರೆ.
-masthmagaa.com
Contact Us for Advertisement