ಸಂದೇಶ್‌ಖಲಿ ಪ್ರಕರಣ: ಬಿಜೆಪಿ ಮತ್ತು ಟಿಎಂಸಿ ನಡುವೆ ವಾಗ್ವಾದ!

masthmagaa.com:

ಈ ವರ್ಷದ ಆರಂಭದಲ್ಲಿ ವ್ಯಾಪಕವಾಗಿ ಸುದ್ದಿಯಾಗಿದ್ದ ಪಶ್ಚಿಮ ಬಂಗಾಳದ ಸಂದೇಶ್‌ಖಾಲಿ ಪ್ರಕರಣಕ್ಕೆ ಸ್ಪೋಟಕ ಟ್ವಿಸ್ಟ್‌ ಸಿಕ್ಕಿದೆ. ಪಶ್ಚಿಮಬಂಗಾಳದ ವಿಪಕ್ಷ ನಾಯಕ, ಬಿಜೆಪಿಯ ಸುವಿಂಧು ಅಧಿಕಾರಿ ಅಣತಿಯಂತೆ ಮಹಿಳೆಯುರು ಲೈಂಗಿಕ ಕಿರುಕುಳದ ದೂರು ಸಲ್ಲಿಸಿದ್ರು. ನೀವು ಈ ರೀತಿ ಮಾಡಲಿಲ್ಲ ಅಂದ್ರೆ ದೊಡ್ಡದೊಡ್ಡವ್ರನ್ನ ಅರೆಸ್ಟ್‌ ಮಾಡಿಸೋಕಾಗಲ್ಲ ಅಂತ ಸುವಿಂಧು ಅವ್ರು ಹೇಳಿದ್ರು ಅದಕ್ಕಾಗಿ ನಾವು ಒಂದಿಷ್ಟು ಮಹಿಳೆಯರನ್ನ ಹುಡ್ಕೊಂಡು ಅವ್ರಿಂದ ಕಂಪ್ಲೇಂಟ್‌ ಹಾಕಿಸಿದ್ವಿ, ಅಂತ ಬಿಜೆಪಿಯ ಕಾರ್ಯಕರ್ತ ಗಂಗಾಧರ್‌ ಕಾಯಲ್‌ ಹೇಳಿರೋ ವಿಡಿಯೋ ಇದೀಗ ಸೋಶಿಯಲ್‌ ಮೀಡಿಯಾದಲ್ಲಿ ಹರಿದಾಡ್ತಿದೆ. ಈ ವಿಡಿಯೋವನ್ನ ಹಿಡ್ಕೊಂಡು TMC ಬಿಜೆಪಿ ಮೇಲೆ ಮುಗಿಬಿದ್ದಿದೆ. ಆದ್ರೆ ವಿಡಿಯೋದಲ್ಲಿರೋ ವ್ಯಕ್ತಿ ಗಂಗಾಧರ್‌, ಇದು ನನ್ನ ವಿಡಿಯೋ ಅಲ್ಲ, AI ಬಳಸಿ ತಿರುಚಿದ್ದಾರೆ ಅಂತ ಆರೋಪಿಸಿದ್ದಾರೆ. ಇತ್ತ ಬಿಜೆಪಿ ನಾಯಕ ಸುವೆಂದು ಅಧಿಕಾರಿ ಕೂಡ, ʻಈ ವಿಡಿಯೋವನ್ನ ತಿರುಚಲಾಗಿದೆ, ಇದು TMC ಪಿತೂರಿ ಅಂತೇಳಿದ್ದಾರೆ.

-masthmagaa.com

Contact Us for Advertisement

Leave a Reply