masthmagaa.com:
ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಅವರು ಬೆಳಗಾವಿಯ ಸುಮಾರು 20 ಶಾಸಕರನ್ನು ಕರೆದುಕೊಂಡು ಮೈಸೂರು ದಸರಾ ವೀಕ್ಷಿಸಿಲು ಟ್ರಿಪ್ ಪ್ಲಾನ್ ಮಾಡಿದ್ದಾರೆ. ಆದ್ರೆ ಸತೀಶ್ ಅವರ ಟ್ರಿಪ್ಗೆ ಕಾಂಗ್ರೆಸ್ ಹೈಕಮಾಂಡ್ ಬ್ರೇಕ್ ಹಾಕಿದೆ ಅಂತ ತಿಳಿದು ಬಂದಿದೆ. ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರೋ ಸತೀಶ್ ಜಾರಕಿಹೊಳಿ ಎಲ್ಲರನ್ನೂ ಸೇರಿಸಿಕೊಂಡು ಮೈಸೂರಿಗೆ ಹೋಗಲು ಬಸ್ ಬುಕ್ ಮಾಡಿದ್ದರು. ಆದರೆ, ಹೈ ಕಮಾಂಡ್ ತಕ್ಷಣ ಮಧ್ಯಪ್ರವೇಶ ಮಾಡಿ, ಈ ಟೈಮ್ನಲ್ಲಿ ಶಾಸಕರನ್ನು ಒಗ್ಗೂಡಿಸಿಕೊಂಡು ಹೋಗೋದು ಬೇಡ. ವಿಪಕ್ಷಗಳಿಗೆ ನಾವೇ ಆಹಾರ ಕೊಟ್ಟಂತೆ ಆಗಲಿದೆ ಅಂತ ಸತೀಶ್ ಜಾರಕಿಹೊಳಿ ಅವರಿಗೆ ಮನವರಿಕೆ ಮಾಡಿಕೊಟ್ಟಿದೆ ಎನ್ನಲಾಗಿದೆ. ಈ ಬಗ್ಗೆ ಸತೀಶ್ ರಿಯಾಕ್ಟ್ ಮಾಡಿದ್ದು, ಕೆಲವರು ಶಾಸಕರೆಲ್ಲ ಸೇರಿ ಹೋಗಬೇಕು ಅನ್ಕೊಂಡಿದ್ವಿ. ಈಗ ದಸರ ಹಬ್ಬ ಬೇಡ ಅಂತ ಟ್ರಿಪ್ ಕ್ಯಾನ್ಸಲ್ ಮಾಡಿದ್ವಿ. “ಮುಂದೆ ಹೋಗಬೇಕು ಅಂತಾದ್ರೆ ಸಿಎಂ ಹಾಗೂ ಅಧ್ಯಕ್ಷರ ಗಮನಕ್ಕೆ ತಂದು ಹೋಗ್ತೀವಿ. ಇದು ಪಾರ್ಟಿಯ ಒಳಗೆ ಮಾಡೋ ಟ್ರಿಪ್, ಯಾವುದೇ ಬಣ ಗಿಣ ಅಂತೇನಲ್ಲ” ಅಂತ ಸ್ಪಷ್ಟಪಡಿಸಿದ್ದಾರೆ.
-masthmagaa.com
Contact Us for Advertisement