ಬಿಡಿಎ ವಿರುದ್ದ ಸುಪ್ರೀಂಕೋರ್ಟ್‌ ಗರಂ: ಆಯುಕ್ತ ರಾಜೇಶ್‌ ಗೌಡ ವರ್ಗಾವಣೆ

masthmagaa.com:

ಸುಪ್ರೀಂಕೋರ್ಟ್‌ ಆದೇಶ ಉಲ್ಲಂಘಿಸಿ ಜಾಗ ಹಂಚಿಕೆ ಮಾಡಿರೊ ಬೆಂಗಳೂರು ನಗರಾಭಿವೃದ್ದಿ ಪ್ರಾಧಿಕಾರದ ವಿರುದ್ದ ಸುಪ್ರೀಂಕೋರ್ಟ್‌ ಆಕ್ಷೇಪ ವ್ಯಕ್ತಪಡಿಸಿದೆ. ಗೃಹ ಸಚಿವ ಅರಗ ಜ್ಞಾನೇಂದ್ರ ಸೇರಿದಂತೆ ಹಲವು ವಿಐಪಿಗಳಿಗೆ ಅಲ್ಟರ್‌ನೇಟಿವ್‌ ಸೈಟ್ಸ್‌ ಅಥ್ವಾ ಪರ್ಯಾಯ ನಿವೇಶನಗಳನ್ನ ಹಂಚಿಕೆ ಮಾಡಲಾಗಿದೆ ಅಂತ ಬಿಡಿಎ ಆಯುಕ್ತ ರಾಜೇಶ್‌ ಗೌಡರ ವಿರುದ್ದ ಆರೋಪಿಸಿದೆ. ಇದರ ಬೆನ್ನಲ್ಲೇ ರಾಜೇಶ್‌ ಗೌಡರನ್ನ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಹಾಗೂ ನೂತನ ಆಯುಕ್ತರಾಗಿ ಇಂಧನ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಕುಮಾರ್‌ ನಾಯ್ಕ್‌ ಅವ್ರನ್ನ ನೇಮಕ ಮಾಡಲಾಗಿದೆ.

-masthmagaa.com

Contact Us for Advertisement

Leave a Reply