masthmagaa.com:
ರಷ್ಯಾಧ್ಯಕ್ಷ ಪುಟಿನ್ರಂತೆ ದೇಶದಲ್ಲಿ ಪ್ರಧಾನಿ ಮೋದಿ ಭಯ ಹುಟ್ಟಿಸಲು ಯತ್ನಿಸುತ್ತಿದ್ದಾರೆ ಅಂತ ಎನ್ಸಿಪಿ ನಾಯಕ ಶರದ್ ಪವಾರ್ ಆರೋಪಿಸಿದ್ದಾರೆ. ಅಲ್ದೇ ದೇಶದಲ್ಲಿ ಒಬ್ಬ ಹೊಸ ಪುಟಿನ್ ರೆಡಿಯಾಗ್ತಿದ್ದಾರೆ ಅನ್ನೊ ಭಯ ನಮಗೂ ಕಾಡ್ತಿದೆ. ಇನ್ನು ಕೇಂದ್ರದಲ್ಲಿ ಆಡಳಿತ ನಡೆಸ್ತಿರೊ ಮೋದಿ, ಇತರರನ್ನ ವಿಮರ್ಶೆ ಮಾಡ್ತಿದ್ದಾರೆ. ಆದ್ರೆ ಕಳೆದ ವರ್ಷಗಳ ಆಡಳಿತದಲ್ಲಿ ತಮ್ಮ ಸರ್ಕಾರ ಜನರಿಗೆ ಏನು ಮಾಡಿದೆ ಅನ್ನೊದ್ರ ಬಗ್ಗೆ ಮಾತಾಡ್ತಿಲ್ಲ ಅಂತ ಮೋದಿ ವಿರುದ್ದ ಪವಾರ್ ವಾಗ್ದಾಳಿ ನಡೆಸಿದ್ದಾರೆ. ಶರದ್ ಪವಾರ್ ಹೇಳಿಕೆಗೆ ರಿಯಾಕ್ಟ್ ಮಾಡಿರೊ ಮಹಾರಾಷ್ಟ್ರದ ಡಿಸಿಎಂ ದೇವೇಂದ್ರ ಫಡ್ನವಿಸ್, ಎಲೆಕ್ಷನ್ನಲ್ಲಿ ಸೋಲ್ತಾರೆ ಅನ್ನೊ ಹತಾಶೆಯಿಂದ ಈ ರೀತಿ ಹೇಳ್ತಿದ್ದಾರೆ. ಯಾವಾಗೆಲ್ಲ ಮೋದಿ ಅವ್ರ ವಿರುದ್ದ ಇಂತಹ ಆರೋಪಗಳನ್ನ ಮಾಡಲಾಗುತ್ತೊ, ಅವಾಗೆಲ್ಲ ಮೋದಿ ಅವ್ರು ದೊಡ್ಡ ಗೆಲುವನ್ನ ಪಡ್ಕೊಳ್ತಾರೆ ಅಂತ ಟಾಂಗ್ ಕೊಟ್ಟಿದ್ದಾರೆ.
-masthmagaa.com
Contact Us for Advertisement