masthmagaa.com:
ಚುನಾವಣಾ ಆಯೋಗ ಶಿವಸೇನೆ ಪಕ್ಷದ ಹೆಸರು ಹಾಗೂ ಚಿಹ್ನೆಯಾದ ಬಿಲ್ಲು-ಬಾಣವನ್ನ ಬಳಸದಂತೆ ಎರಡೂ ಬಣಗಳಿಗೆ ಆದೇಶ ನೀಡಿತ್ತು. ಬಳಿಕ ಎರಡೂ ಬಣಗಳು ಆಯೋಗಕ್ಕೆ ಮೂರು ಆಯ್ಕೆಗಳನ್ನ ನೀಡಿದ್ವು. ಇದೀಗ ಉದ್ದವ್ ಬಣಕ್ಕೆ ʻಶಿವಸೇನಾ ಉದ್ದವ್ ಬಾಳಾಸಾಹೇಬ್ ಠಾಕ್ರೆʼ ಅಂತ ಹಾಗೂ ಪಕ್ಷದ ಗುರುತಾಗಿ ʻಟಾರ್ಚ್ʼನ್ನ ಆಯೋಗ ನೀಡಿದೆ. ಇತ್ತ ಏಕನಾಥ್ ಶಿಂಧೆ ಬಣಕ್ಕೆ, ʻಬಾಳಾಸಾಹೇಬ್ಜಿ ಶಿವಸೇನಾʼ ಅಂತ ಹೆಸರನ್ನ ನೀಡಿದೆ. ಇನ್ನು ಶಿವಸೇನೆ ಪಕ್ಷದ ವಿಚಾರವಾಗಿ ನಡೆಯುತ್ತಿರೊ ಹೋರಾಟದಲ್ಲಿ ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ ನೇತೃತ್ವದ ಬಣಕ್ಕೆ ಚುನಾವಣಾ ಆಯೋಗದಲ್ಲಿ ಗೆಲುವು ಸಿಗಲಿದೆ ಅಂತ ಮಾಜಿ ಸಿಎಂ ದೇವೇಂದ್ರ ಫಡ್ನವೀಸ್ ಹೇಳಿದ್ದಾರೆ. ಇತ್ತ ಚುನಾವಣಾ ಆಯೋಗದ ಆದೇಶವನ್ನ ರದ್ದುಗೊಳಿಸುವಂತೆ ಕೋರಿ ಉದ್ದವ್ ಠಾಕ್ರೆ ಬಣ ದಿಲ್ಲಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದೆ. ಚುನಾವಣಾ ಆಯೋಗ ನಮ್ಮ ವಾದವನ್ನ ಆಲಿಸಿಲ್ಲ. ಹಾಗೂ ನಮಗೆ ಯವುದೇ ವಿವರಣೆಯನ್ನ ನೀಡದೇ ಅರ್ಜಂಟ್ನಲ್ಲಿ ನಿರ್ಧಾರ ತೆಗೆದುಕೊಂಡಿದೆ ಅಂತ ಆರೋಪಿಸಿದೆ.
-masthmagaa.com
Contact Us for Advertisement