ಬೆಂಗಳೂರು ಶಾಲೆಗಳಿಗೆ ಬಾಂಬ್‌ ಬೆದರಿಕೆ: ಇಸ್ಲಾಂ ಧರ್ಮಗುರು ಸೈಯದ್ ತಾಜಾವುದ್ದೀನ್ ಪ್ರತಿಕ್ರಿಯೆ

masthmagaa.com:

ಡಿಸೆಂಬರ್‌ 1 ರಂದು ಸಿಲಿಕಾನ್‌ ಸಿಟಿ ಬೆಂಗಳೂರಿನ ಒಟ್ಟು 48 ಶಾಲೆಗಳಿಗೆ ಬಾಂಬ್‌ ಬೆದರಿಕೆ ಹಾಕಲಾಗಿತ್ತು. ಇದ್ರಿಂದ ನಗರದಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ. ಆದ್ರೆ ಪೊಲೀಸರು ಪ್ರಾಥಮಿಕ ತನಿಖೆ ನಡೆಸಿ ಯಾವ್ದೇ ರೀತಿ ಭಯ ಪಡೋ ಅಗತ್ಯವಿಲ್ಲ. ಇವೆಲ್ಲಾ ಹುಸಿ ಬಾಂಬ್‌ ಬೆದರಿಕೆ ಹಾಕಿರೋದು ಅಂತ ಹೇಳಿದ್ದಾರೆ. ಈ ಕುರಿತು ಇದೀಗ ಹುಬ್ಬಳ್ಳಿಯಲ್ಲಿ ಇಸ್ಲಾಂ ಧರ್ಮಗುರು ಸೈಯದ್ ತಾಜಾವುದ್ದೀನ್ ಖಾದ್ರಿ ಅವ್ರು ರಿಯಾಕ್ಟ್‌ ಮಾಡಿದ್ದಾರೆ. ಈ ಕುರಿತು ಮಾತನಾಡಿರೋ ಅವ್ರು, ಈ ರೀತಿ ಬಾಂಬ್‌ ಬೆದರಿಕೆ ಹಾಕಿದವ್ರ ಮೇಲೆ ಗುಂಡು ಹಾರಿಸಿಬಿಡಿ ಅಥ್ವಾ ಗಲ್ಲಿಗೇರಿಸಿ. ಯಾಕಂದ್ರೆ ಈ ರೀತಿ ಬಾಂಬ್‌ ಹಾಕ್ತೀವಿ ಅಂತ ಬೆದರಿಕೆ ಹಾಕೋದು ಸರಿಯಲ್ಲ. ಇಂಥವ್ರಿಗೆ ಕಠಿಣವಾದ ಶಿಕ್ಷೆಯಾಗ್ಬೇಕು ಅಂತ ತೀಕ್ಷ್ಣವಾಗಿ ಉತ್ತರಿಸಿದ್ದಾರೆ.

-masthmagaa.com

Contact Us for Advertisement

Leave a Reply