ಶೋಷಿತ ವರ್ಗಗಳ ಜಾಗೃತಿ ಸಮಾವೇಶ: ಜಾತಿಗಣತಿ ವರದಿಗೆ ಸಿಎಂ ಅಸ್ತು!

masthmagaa.com:

ಇತ್ತೀಚಿಗೆ ಕಾಂಗ್ರೆಸ್‌ನಲ್ಲಿ ಭಿನ್ನಮತಕ್ಕೆ ಕಾರಣವಾಗಿ ಸೈಲೆಂಟಾಗಿದ್ದ ಜಾತಿಗಣತಿ ವಿಚಾರ ಮತ್ತೆ ಮುನ್ನಲೆಗೆ ಬಂದಿದೆ. ಇದೀಗ ಸಿಎಂ ಸಿದ್ದರಾಮಯ್ಯ ಜಾತಿ ಗಣತಿ ವರದಿ ಸ್ವೀಕರಿಸೊದಾಗಿ ಹೇಳಿಕೆ ನೀಡಿದ್ದಾರೆ. ಚಿತ್ರದುರ್ಗದಲ್ಲಿ ಶೋಷಿತರ ವರ್ಗಗಳ ಸಮಾವೇಶದಲ್ಲಿ ಮಾತನಾಡಿದ ಸಿಎಂ, “ಜಾತಿಗಣತಿಯಲ್ಲಿ ಲೋಪದೋಷ ಇದ್ರೆ ತಜ್ಞರ ಸಲಹೆ ಪಡಿಯುತ್ತೇನೆ. ಕಾಂತರಾಜು ಸಮಿತಿ ಮಾಡಿದ್ದು ನಾನೇ. ನಾನು ಸಿಎಂ ಸ್ಥಾನದಿಂದ ಇಳಿಯುವಾಗ ವರದಿ ಪೂರ್ಣ ಆಗಿರಲಿಲ್ಲ. ಈ ವರದಿಯನ್ನ ಕ್ಯಾಬಿನೆಟ್‌ನಲ್ಲಿಟ್ಟು ಚರ್ಚಿಸ್ತೇನೆ, ಕೆಲವು ಶಕ್ತಿಗಳು ನನ್ನನ್ನ ವಿರೋಧ ಮಾಡುತ್ತಿವೆ. ಅಂತ ಹೇಳಿದ್ದಾರೆ. ಇನ್ನು ಜಾತಿ ಗಣತಿ ವರದಿಗೆ ವಿರೋಧಿಸಿದ್ದ ಡಿಸಿಎಂ ಡಿ ಕೆ ಶಿವಕುಮಾರ್‌ ಅದೇ ವೇದಿಕೆ ಮೇಲಿದ್ರು ತುಟಿ ಪಿಟಿಕ್‌ ಅಂದಿಲ್ಲ. ಅಂದ್ಹಾಗೆ ಈ ಹಿಂದೆ ಕಾಂಗ್ರೆಸ್‌ನ ಲಿಂಗಾಯತ ಶಾಸಕರು, ಅಖಿಲ ಭಾರತ ವೀರಶೈವ ಮಹಾಸಭಾ, ಒಕ್ಕಲಿಗ ಸಮುದಾಯಗಳಿಂದ ಜಾತಿಗಣತಿ ವರದಿಗೆ ತೀವ್ರ ವಿರೋಧ ಕೇಳಿ ಬಂದಿತ್ತು.

-masthmagaa.com

Contact Us for Advertisement

Leave a Reply