masthmagaa.com:
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ, ಮಾಜಿ ಸಿಎಂ ಸಿದ್ದರಾಮಯ್ಯ ಅವ್ರನ್ನ ಸಿದ್ರಾಮು ಲ್ಲಾ ಖಾನ್ ಅಂದಿದ್ದಕ್ಕೆ ಕಾಂಗ್ರೆಸ್ನಿಂದ ವ್ಯಾಪಕ ಖಂಡನೆ ವ್ಯಕ್ತವಾಗ್ತಿದೆ. ಸಿದ್ರಾಮುಲ್ಲಾ ಖಾನ್ ಹೇಳಿಕೆ ಸರಿಯಿಲ್ಲ. ನಾವೂ ಪ್ರತಿಭಟನೆ ಪ್ರಾರಂಭಿಸಿದ್ರೆ, ಸಿಟಿ ರವಿ ಹೊರಗೆ ಬರೋಕೆ ಸಾಧ್ಯವಾಗಲ್ಲ ಅಂತ ಶಾಸಕ ಎಂ ಬಿ ಪಾಟೀಲ್ ಕಿಡಿಕಾರಿದ್ದಾರೆ. ಸಿದ್ದರಾಮೇಶ್ವರ ಅನ್ನೊ ದೇವರ ಹೆಸರಿನಿಂದ ಸಿದ್ದರಾಮಯ್ಯ ಹೆಸರು ಬಂದಿದೆ. ಇದನ್ನು ಇಲ್ಲಿಗೇ ನಿಲ್ಲಿಸಿದ್ರೆ ಸರಿ. ಇಲ್ಲದಿದ್ದರೆ ಮತ್ತಷ್ಟು ವಿಕೋಪಕ್ಕೆ ಹೋಗಬಹುದು ಅಂತ ಎಚ್ಚರಿಕೆ ನೀಡಿದ್ದಾರೆ. ಇತ್ತ ಅಲ್ಪಸಂಖ್ಯಾತರನ್ನ ಓಲೈಸುವ ಸಿದ್ದರಾಮಯ್ಯ ಅವ್ರನ್ನ ಸಿದ್ರಾಮುಲ್ಲಾ ಖಾನ್ ಅಂತ ಸಂಬೋಧಿಸಿದ್ದನ್ನ ಸಿಟಿ ರವಿ ಸಮರ್ಥಿಸಿಕೊಂಡಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಈ ರೀತಿ ಬೆದರಿಕೆಗಳು ನಡೆಯಲ್ಲ..ಸಿದ್ರಾಮುಲ್ಲಾ ಖಾನ್ ಅಂತೇಳಿದ್ದಕ್ಕೆ ಕಾಂಗ್ರೆಸ್ಸಿಗರ ಮೈ ಉರಿಯುತ್ತಿದೆ. ಹೀಗೆ ಉರಿ ಹತ್ತುತ್ತೆ ಅಂತ ಗೊತ್ತಿದ್ರೆ 10 ವರ್ಷ ಮೊದಲೇ ಹೇಳ್ತಿದ್ದೆ ಅಂತ ಮತ್ತಷ್ಟು ಪೆಟ್ರೋಲ್ ಸುರಿದಿದ್ದಾರೆ.
-masthmagaa.com
Contact Us for Advertisement