masthmagaa.com:
ದೇಶದಲ್ಲಿ ರಾಮಜನ್ಮಭೂಮಿ ಆಂದೋಲನವನ್ನ ಆರಂಭಿಸಿದವರಲ್ಲಿ ಸಿಖ್ಖರೇ ಮೊದಲಿಗರು. ಸನಾತನ ಧರ್ಮದ ರಕ್ಷಣೆಗೆ ಸಿಖ್ಖರು ಬಹಳಷ್ಟು ಕೊಡುಗೆ ನೀಡಿದ್ದಾರೆ ಅಂತ ರಕ್ಷಣಾ ಸಚಿವ ರಾಜ್ನಾಥ್ ಸಿಂಗ್ ಹೇಳಿದ್ದಾರೆ. ಉತ್ತರಪ್ರದೇಶದ ಆಲಂಬಾಗ್ನ ಗುರುದ್ವಾರದ ಕಾರ್ಯಕ್ರಮವೊಂದರಲ್ಲಿ ಮಾತನಾಡಿರೊ ಅವರು “1858ರ ಸರ್ಕಾರಿ ದಾಖಲೆ ಒಂದರ ಪ್ರಕಾರ, ಗುರು ಗೋವಿಂದ ಸಿಂಗರ ಅನುಯಾಯಗಳು ಒಮ್ಮೆ ಬಾಬ್ರಿ ಮಸೀದಿಯನ್ನು ವಶಪಡಿಸಿಕೊಂಡು ಗೋಡೆಗಳ ಮೇಲೆ ʻರಾಮ್ ರಾಮ್ʼ ಅಂತ ಬರೆದಿದ್ರು. ರಾಮಜನ್ಮಭೂಮಿಗೆ ಸಿಖ್ಖರ ಕೊಡುಗೆ ಬಹಳಷ್ಟಿದೆ. ಅಲ್ಲದೆ ಈ ದೇಶದಲ್ಲಿ ಯಾವುದಾದ್ರು ಒಂದು ಸಮುದಾಯ, ತಾನಿರುವ ಜನಸಂಖ್ಯೆಗಿಂತ ಹೆಚ್ಚು ಜನರನ್ನ ಈ ದೇಶಕ್ಕಾಗಿ ಬಲಿ ಕೊಟ್ಟಿದೆ ಅಂದ್ರೆ, ಅದು ಸಿಖ್ ಸಮುದಾಯ” ಅಂದಿದಾರೆ.
Contact Us for Advertisement