ಲೋಕಸಭೆಯಲ್ಲಿ ಏಕಾಂಗಿ ಸ್ಪರ್ಧೆ, ಯಾರ ಜೊತೆಗೂ ಮೈತ್ರಿಯಿಲ್ಲ: ದೇವೇಗೌಡ

masthmagaa.com:

ಮಹತ್ವದ ಬೆಳವಣಿಗೆಯಲ್ಲಿ ಬಿಜೆಪಿ ಜೆಡಿಎಸ್‌ ಮೈತ್ರಿಗೆ ದೊಡ್ಡಗೌಡ್ರು ತಿಲಾಂಜಲಿ ಇಟ್ಟಿದ್ದಾರೆ. ಇತ್ತೀಚೆಗೆ ಜೆಡಿಎಸ್‌ ಹಾಗೂ ಬಿಜೆಪಿ ಮೈತ್ರಿ ಮಾಡಿಕೊ‍ಳ್ಳಲಿವೆ ಅನ್ನೋ ಮಾತುಗಳು ರಾಜ್ಯ ರಾಜಕೀಯದಲ್ಲಿ ಭಾರಿ ಸುದ್ಧಿಯಾಗಿತ್ತು. ಆದ್ರೆ ಇದೀಗ ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್‌ ಏಕಾಂಗಿಯಾಗಿ ಸ್ಪರ್ಧೆ ಮಾಡಲಿದೆ ಇದ್ರಲ್ಲಿ ಯಾವ ಅನುಮಾನ ಬೇಡ ಅಂತ ಮಾಜಿ ಪ್ರಧಾನಿ, ಜೆಡಿಎಸ್‌ ರಾಷ್ಟ್ರಾಧ್ಯಕ್ಷ ಎಚ್‌.ಡಿ ದೇವಗೌಡ ಸ್ಪಷ್ಟಪಡಿಸಿದ್ದಾರೆ. ಇದೇ ವೇಳೆ ನಾವು ಯಾವ ಪಕ್ಷದ ಜತೆಗೂ ಮೈತ್ರಿ ಮಾಡಿಕೊಳ್ಳುವುದಿಲ್ಲ. ಎಷ್ಟು ಸ್ಥಾನಗಳಾದ್ರು ಗೆಲ್ಲಲಿ ಅದರ ಬಗ್ಗೆ ಚಿಂತಿಸೋದಿಲ್ಲ. ಏಕಾಂಗಿಯಾಗಿ ಸ್ಪರ್ಧೆ ಮಾಡುತ್ತೇವೆ ಅಂತ ಹೇಳಿದ್ದಾರೆ. ಅಲ್ದೆ ಕುಮಾರಸ್ವಾಮಿಯವರನ್ನ ಬಿಜೆಪಿ ವಿರೋಧಪಕ್ಷದ ನಾಯಕರನ್ನಾಗಿ ಮಾಡ್ತಾರೆ ಅನ್ನೋ ಸುದ್ಧಿ ಹಬ್ಬಿಸಿದ್ದರು. ಈಗ ಚಿಕ್ಕಮಗಳೂರಿನ ಒಬ್ಬರನ್ನ ಅಧ್ಯಕ್ಷರನ್ನಾಗಿ ಹಾಗೂ ಯತ್ನಾಳ್‌ ಅವ್ರನ್ನ ಪ್ರತಿಪಕ್ಷದ ನಾಯಕರನ್ನಾಗಿ ಮಾಡಲು ಒಂದು ಸುತ್ತಿನ ಸಭೆ ನಡೆದಿದೆ. ಅದ್ರೂ ಜೆಡಿಎಸ್‌ ಬಗ್ಗೆ ಸು‍ಳ್ಳು ಹಬ್ಬಿಸಲಾಗ್ತಿದೆ ಅಂತ ದೇವಗೌಡರು ಹೇಳಿದ್ದಾರೆ. ಈ ಮೂಲಕ ಎಲ್ಲಾ ಊಹಾಪೋಹಗಳಿಗೆ ತೆರೆ ಎಳಿದಿದ್ದಾರೆ.

-masthmagaa.com

Contact Us for Advertisement

Leave a Reply