masthmagaa.com:
ಸಂಪತ್ತಿನ ಆಸೆಗಾಗಿ ನರಬಲಿ ನೀಡಿದ ಘಟನೆ ದೆಹಲಿಯಲ್ಲಿ ನಡೆದಿದೆ. ಇಬ್ಬರು ಆರೋಪಿಗಳು 6 ವರ್ಷದ ಅಪ್ರಾಪ್ತ ಬಾಲಕನನ್ನು ಚಾಕುವಿನಿಂದ ಕುತ್ತಿಗೆ ಸೀಳಿ ಹತ್ಯೆ ಮಾಡಿದ್ದಾರೆ. ಬಿಹಾರ ಮೂಲದ ಈ ಇಬ್ಬರನ್ನ ವಿಜಯ್ ಮತ್ತು ಅಮರ್ ಅಂತ ಗುರುತಿಸಲಾಗಿದ್ದು, ಬಾಲಕನ ಪೋಷಕರ ಜೊತೆಯಲ್ಲಿ ಕಟ್ಟಡ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ರು ಎನ್ನಲಾಗಿದೆ. ಪೋಲಿಸರು ಬಂಧಿಸಿ ವಿಚಾರಿಸಿದಾಗ ಯಾರೋ ಪ್ರಸಾದ ತಂದು ಕೊಟ್ರು ನಂತ್ರ ಭ್ರಮೆಗೊಳಗಾಗಿ ಸಂಪತ್ತನ್ನು ಪಡೆಯಲು ನರಬಲಿ ನೀಡ್ಬೇಕು ಅಂತ ಕೊಂದ್ವಿ ಅಂತ ಒಪ್ಪಿಕೊಂಡಿದ್ದಾರೆ.
-masthmagaa.com
Contact Us for Advertisement