ಉದಯನಿಧಿ ಸ್ಟಾಲಿನ್‌ ಒಬ್ಬ ಸ್ಮಾಲ್‌ ಲೀಡರ್‌: ರಾಘವ್‌ ಚಡ್ಡಾ

masthmagaa.com:

ಬಿಜೆಪಿ ಸರ್ಕಾರ ತನ್ನ ವಿಫಲತೆ ಹಾಗೂ ಭ್ರಷ್ಟಾಚಾರದಿಂದ ಜನರ ಗಮನವನ್ನ ಬೇರೆ ಕಡೆ ಸೆಳೆಯಲು ಸನಾತನ ಧರ್ಮದ ವಿಚಾರವನ್ನ ಎಳೆದು ತರ್ತಿದೆ ಅಂತ ತಮಿಳುನಾಡು ಸಿಎಂ ಎಂ.ಕೆ ಸ್ಟಾಲಿನ್‌ ವಾಗ್ದಾಳಿ ಮಾಡಿದ್ದಾರೆ. 2014ರ ಲೋಕಸಭೆಗೂ ಮುನ್ನ ನೀಡಿದ್ದ ಭರವಸೆಗಳಲ್ಲಿ ಯಾವುದನ್ನೂ ಪ್ರಧಾನಿ ನರೇಂದ್ರ ಮೋದಿಯವರು ಪೂರೈಸಿಲ್ಲ. ಹೀಗಾಗಿ ಬಿಜೆಪಿ ಸರ್ಕಾರ ಜನರ ನಂಬಿಕೆಯನ್ನ ಕಳೆದುಕೊಂಡಿದ್ದು, ಈಗ ಪ್ರಚಾರವನ್ನ ಗಿಟ್ಟಿಸಿಕೊಳ್ಳಲು ನೋಡ್ತಿದೆ ಅಂತ ಸ್ಟಾಲಿನ್‌ ಆರೋಪಿಸಿದ್ದಾರೆ. ಇತ್ತ ಉದಯನಿಧಿ ಅವ್ರ ಹೇಳಿಕೆಯನ್ನ ಆಪ್‌ ಸಂಸದ ರಾಘವ್‌ ಚಡ್ಡಾ ಖಂಡಿಸಿದ್ದಾರೆ. ಯಾವುದೋ ಒಂದು ಪಾರ್ಟಿಯ ಸಣ್ಣ ಲೀಡರ್‌ ಈ ರೀತಿಯ ಹೇಳಿಕೆ ಕೊಟ್ಟ ಮಾತ್ರಕ್ಕೆ ಅದು ಪ್ರತಿಪಕ್ಷಗಳ ಒಕ್ಕೂಟ ಇಂಡಿಯಾವನ್ನ ಪ್ರತಿನಿಧಿಸೋದಿಲ್ಲ. ನಾನು ಸನಾತನ ಧರ್ಮದಿಂದ ಬಂದವನು. ಅಂತಹ ಹೇಳಿಕೆಗಳನ್ನು ನಾನು ಖಂಡಿಸುತ್ತೇನೆ ಅಲ್ಲದೆ ವಿರೋಧಿಸುತ್ತೇನೆ. ಇಂತಹ ಹೇಳಿಕೆಗಳನ್ನು ನೀಡಬಾರದು. ಧರ್ಮದ ಬಗ್ಗೆ ಇಂತಹ ಹೇಳಿಕೆ ನೀಡುವುದನ್ನು ತಪ್ಪಿಸಬೇಕು. ನಾವು ಎಲ್ಲಾ ಧರ್ಮಗಳನ್ನು ಗೌರವಿಸಬೇಕು ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply