masthmagaa.com:
ಮತ್ತೊಮ್ಮೆ ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿನ ಮೇಲೆ ಕಿಡಿಗೇಡಿಗಳು ಕಲ್ಲು ತೂರಾಟ ಮಾಡಿರೋ ಘಟನೆ ಒಡಿಶಾದಲ್ಲಿ ನಡೆದಿದೆ. ನೆನ್ನೆ ತಡರಾತ್ರಿ ಒಡಿಶಾದ ಧೆಂಕನಲ್-ಅಂಗುಲ್ ರೈಲ್ವೆ ವಿಭಾಗದಲ್ಲಿ, ಮೆರಮಂಡಲಿ ಮತ್ತು ಬುಧಪಾಂಕ್ ಸ್ಟೇಷನ್ ನಡುವೆ ಈ ಘಟನೆ ನಡೆದಿದೆ. ರೂರ್ಕೆಲಾ-ಪುರಿ ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿನ ಮೇಲೆ ಕಿಡಿಗೇಡಿಗಳು ಕಲ್ಲು ತೂರಾಟ ಮಾಡಿರೋ ಪರಿಣಾಮ ಎಕ್ಸಿಕ್ಯುಟಿವ್ ಕ್ಲಾಸ್ ಕೋಚ್ನ ಕಿಟಕಿ ಗಾಜು ಒಡೆದು ಹೋಗಿದೆ. ಆದ್ರೆ ಕಲ್ಲು ತೂರಾಟದಿಂದ ಪ್ರಯಾಣಿಕರಿಗೆ ಯಾವ್ದೇ ರೀತಿ ಗಾಯಗಳಾಗಿರೋದು ವರದಿಯಾಗಿಲ್ಲ. ಹೀಗಂತ ಪೂರ್ವ ಕರಾವಳಿ ರೈಲ್ವೇ ಅಧಿಕಾರಿಗಳು ತಿಳಿಸಿದ್ದಾರೆ. ಈ ಕುರಿತು ಅಲ್ಲಿನ ಲೋಕಲ್ ಪೊಲೀಸ್ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಕಲ್ಲು ತೂರಾಟ ಮಾಡಿರೋರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುತ್ತೆ ಅಂತ ಹೇಳಿದ್ದಾರೆ. ಅಂದ್ಹಾಗೆ ಈ ಹಿಂದೆ ವಂದೇ ಭಾರತ್ ಎಕ್ಸ್ಪ್ರೆಸ್ ಮೇಲೆ ಸಾಕಷ್ಟು ಬಾರಿ ಈ ರೀತಿ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ರು.
-masthmagaa.com
Contact Us for Advertisement