ಬಿಬಿಸಿ ವರದಿಗೆ ಟಾಂಗ್‌ ಕೊಟ್ಟ ಮೋದಿ! ಇದು ವರ್ಕ್‌ ಆಗಲ್ಲ ಅಂತ ಗುದ್ದು!

masthmagaa.com:

ದೇಶದಲ್ಲಿ ಮೋದಿಯವರ ಬಗ್ಗೆ ಬಿಬಿಸಿ ತಯಾರಿಸಿರೋ ಡಾಕ್ಯುಮೆಂಟರಿ ಬಗ್ಗೆ ತೀವ್ರ ವಿವಾದ ಭುಗೆಲೆದ್ದಿದೆ. ಈ ಸಂಧರ್ಭದಲ್ಲೇ ಪ್ರಧಾನಿ ಮೋದಿ ದೇಶದ ಜನರನ್ನ ಉದ್ದೇಶಿಸಿ ಮಾತನಾಡಿದ್ದು, ಜನರ ಮಧ್ಯೆ ಒಡಕನ್ನ ಸೃಷ್ಟಿ ಮಾಡೋ ಪ್ರಯತ್ನ ನಡೀತಿದೆ. ಆದ್ರೆ ಅದು ಎಂದಿಗೂ ಸಫಲ ಆಗೋದಿಲ್ಲ ಅಂತ ಹೇಳಿದ್ದಾರೆ. ಈ ಮೂಲಕ ಬಿಬಿಸಿ ಮಾಡಿರೋ ವಿವಾದ್ಮಾತ್ಮಕ ವರದಿಗೆ ಮೋದಿ ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದಾರೆ. ಭಾರತವನ್ನ ಒಗ್ಗೂಡಿಸೋಕೆ ಇರೋದು ಒಂದೇ ಮಂತ್ರ. ಅದು ಒಗ್ಗಟ್ಟಿನ ಮಂತ್ರ. ದೇಶ ಒಡೆಯೋಕೆ ಈಗ ಹಲವಾರು ನೆಪಗಳನ್ನು ಸೃಷ್ಟಿಸಲಾಗುತ್ತಿದೆ. ಭಾರತಮಾತೆಯ ಮಕ್ಕಳಲ್ಲಿ ಒಡಕು ಮೂಡಿಸಲು ಹಲವಾರು ವಿವಾದಗಳನ್ನು ಹುಟ್ಟುಹಾಕಲಾಗುತ್ತಿದೆ.‌ ಅದನ್ನ ಮುನ್ನಲೆಗೆ ತರಲಾಗ್ತಿದೆ. ಆದರೆ ಅದು ಸಫಲ ಆಗೋದಿಲ್ಲ. ಜನರು ಈ ವಿಚಾರದಲ್ಲಿ ತುಂಬಾ ಎಚ್ಚರದಿಂದ ಇರಬೇಕು ಅಂತ ಹೇಳಿದ್ದಾರೆ. ಏಕತೆಯ ಮಂತ್ರ ಭಾರತದ ಶಕ್ತಿ. ಇನ್ನು ಈ ಕಡೆ ಬಿಬಿಸಿ ವರದಿಯ ಪರ ವಿರೋಧದ ಬೆಂಕಿ ಕೂಡ ತಣ್ಣಗಾಗ್ತಿಲ್ಲ. ಇದೀಗ ಬಿಬಿಸಿಯನ್ನ ಭಾರತದಿಂದ ಬ್ಯಾನ್‌ ಮಾಡಬೇಕು ಅಂತ ಹಿಂದೂ ಸೇನಾ ಕಾರ್ಯಕರ್ತರು ದೆಹಲಿಯಲ್ಲಿರೋ ಬಿಬಿಸಿ ಕಚೇರಿಯ ಮುಂದೆ ಪ್ಲಾಗ್‌ಗಳನ್ನ ನೇತು ಹಾಕಿದ್ದಾರೆ. ಈ ಕುರಿತು ಮಾತನಾಡಿದ ಹಿಂದೂ ಸೇನಾ ಮುಖ್ಯಸ್ಥ ವಿಷ್ಣುಗುಪ್ತ, ಬಿಬಿಸಿ ಭಾರತದ ಸಾರ್ವಭೌಮತೆ ಹಾಗೂ ಐಕ್ಯತೆಗೆ ಒಂದು ಥ್ರೆಟ್‌. ಈಗಿಂದೀಗಲೇ ಆ ಮಾಧ್ಯಮವನ್ನ ಭಾರತದಲ್ಲಿ ಬ್ಯಾನ್‌ ಮಾಡಬೇಕು ಅಂತ ಆಗ್ರಹ ಮಾಡಿದ್ದಾರೆ.

-masthmagaa.com

Contact Us for Advertisement

Leave a Reply