masthmagaa.com:
4 ವರ್ಷದ ಹೆತ್ತ ಮಗನನ್ನ ಕೊಂದ ಆರೋಪದಡಿ ಬಂಧನದಲ್ಲಿರೋ ಸಿಇಒ ಸುಚನಾ ಸೇಠ್ ಕೇಸ್ನಲ್ಲಿ ಒಂದೊಂದೆ ಮಾಹಿತಿಗಳು ಆಚೆ ಬರ್ತಿವೆ. ಸದ್ಯ ಪೋಲಿಸರ ವಿಚಾರಣೆ ವೇಳೆ ಮಗುವನ್ನ ಕೊಂದಿರೋ ಬಗ್ಗೆ ಸರಿಯಾಗಿ ಬಾಯ್ಬಿಡದೇ ಸತಾಯಿಸ್ತಿದ್ದಾರೆ ಅಂತ ವರದಿಯಾಗಿದೆ. ಮಗುವನ್ನ ಕೊಲ್ಲೋಕು ಮುಂಚೆ, ಮಗು ಮತ್ತಿನಲ್ಲಿರೋಕೆ ಒಂದು ಬಾಟಲ್ ಟಾನಿಕ್ಕನ್ನ ಕುಡಿಸಿದ್ರು ಎನ್ನಲಾಗ್ತಿದೆ. ಇನ್ನು ಮಗು ಹತ್ಯೆಯಾದ ಸ್ಥಳದಲ್ಲಿ ಪತ್ತೆಯಾಗಿದ್ದ ರಕ್ತದ ಕಲೆಗಳು ಕೂಡ ಸುಚನಾರದ್ದೇ ಅಂತ ಗೋವಾ DGP ಜಶ್ಪಾಲ ಸಿಂಗ್ ಹೇಳಿದ್ದಾರೆ. ಮತ್ತೊಂದೆಡೆ ಪತಿ ವೆಂಕಟರಮಣ ಜೊತೆ ವಿಚ್ಛೇದನ ಪ್ರಕ್ರಿಯೆ ಹಂತದಲ್ಲಿರುವ ಸುಚನಾ ಸೇಠ್, ಪತಿ ವಿರುದ್ಧ ಕೌಟುಂಬಿಕ ದೌರ್ಜನ್ಯದ ಆರೋಪ ದಾಖಲಿಸಿದ್ದಳು. ಅಲ್ದೇ ಪತಿ ತನಗೆ ಪ್ರತಿ ತಿಂಗಳು 2.5 ಲಕ್ಷ ರೂಪಾಯಿ ಜೀವನಾಂಶ ಕೊಡ್ಬೇಕು ಅಂತ ಬೇಡಿಕೆ ಇಟ್ಟಿದ್ರು ಅಂತ ತಿಳಿದು ಬಂದಿದೆ.
-masthmagaa.com
Contact Us for Advertisement