masthmagaa.com:
ಪತಂಜಲಿ ಆಯುರ್ವೇದ ಕಂಪನಿಯ ದಾರಿತಪ್ಪಿಸೋ ಜಾಹೀರಾತು ಸಂಬಂಧ ಇದೀಗ ಸುಪ್ರಿಂ ಕೋರ್ಟ್ ಬಾಬಾ ರಾಮ್ದೇವ್ ಅವ್ರಿಗೆ ಶೋಕಾಸ್ ನೋಟಿಸ್ ನೀಡಿದೆ. ಜೊತೆಗೆ ವಿಚಾರಣೆಗೆ ಖುದ್ದು ಹಾಜರಾಗುವಂತೆ ಸೂಚಿಸಿದೆ. ಅಲ್ದೇ ಈಗಾಗಲೇ ನ್ಯಾಯಾಲಯ ನೀಡಿರೋ ನೋಟಿಸ್ಗೆ ಪ್ರತಿಕ್ರಿಯೆ ಸಲ್ಲಿಸದ ಪತಂಜಲಿಯನ್ನ ಸುಪ್ರೀಂ ತರಾಟೆಗೆ ತೆಗೆದ್ಕೊಂಡಿದೆ. ಇದ್ರ ಪರಿಣಾಮ ನಿಮ್ಮನ್ನ ಹಿಂಬಾಲಿಸುತ್ತೆ ಅಂತೇಳಿದೆ. ಸೋ ವಿಚಾರಣೆಗೆ ಬರೋವಾಗ ನ್ಯಾಯಾಂಗ ನಿಂದನೆಗೂ ರೆಸ್ಪಾಂಡ್ ಮಾಡಿ ಅಂತೇಳಿದೆ. ಅಂದ್ಹಾಗೆ ವ್ಯಾಕ್ಸಿನೇಷನ್ ಮತ್ತು ಆಧುನಿಕ ಔಷಧಗಳ ವಿರುದ್ಧ ಅಪಪ್ರಚಾರ ಮಾಡಿರೋ ಬಾಬಾ ರಾಮ್ದೇವ್ ವಿರುದ್ಧ ಭಾರತೀಯ ವೈದ್ಯಕೀಯ ಸಂಘ (IMA) ಸಲ್ಲಿಸಿರೋ ವಿಚಾರಣೆ ವೇಳೆ ಕೋರ್ಟ್ ಈ ರೀತಿ ಹೇಳಿದೆ.
-masthmagaa.com
Contact Us for Advertisement