masthmagaa.com:
ಚುನಾವಣಾ ಆಯೋಗಕ್ಕೆ ನೂತನವಾಗಿ ಆಯ್ಕೆಯಾಗಿರೋ ಇಬ್ಬರು ಆಯುಕ್ತರ ನೇಮಕಾತಿ ತಡೆ ಕೋರಿ ಸಲ್ಲಿಸಲಾದ ಅರ್ಜಿಗಳನ್ನ ಇದೀಗ ಸುಪ್ರೀಂ ಕೋರ್ಟ್ ವಜಾಗೊಳಿಸಿದೆ. ʻಚುನಾವಣೆ ಹೊಸ್ತಿಲಲ್ಲಿರೋವಾಗ ಚುನಾವಣಾ ಆಯುಕ್ತರ ನೇಮಕಾತಿಗೆ ತಡೆ ಒಡ್ಡಿದ್ರೆ, ದೇಶದಲ್ಲಿ ಅವ್ಯವಸ್ಥೆ ಉಂಟಾಗುತ್ತೆ ಮತ್ತು ಸಂದಿಗ್ದ ಪರಿಸ್ಥಿತಿ ಎದುರಿಸ್ಬೇಕಾಗುತ್ತೆ. ಇಂತಹದೊಂದು ಪರಿಸ್ಥಿತಿಯಲ್ಲಿ ಕಾನೂನಿನ ಮೇಲೆ ತಡೆಯಾಜ್ಞೆ ಹೇರೋದು ಸೂಕ್ತವಲ್ಲ. ಇನ್ನು ಚುನಾವಣಾ ಆಯೋಗ ಸರ್ಕಾರದ ನಿಯಂತ್ರಣದಲ್ಲಿದೆ ಅಂತ ಹೇಳೋದು ಸರಿಯಲ್ಲʼ ಅಂತ ಕೋರ್ಟ್ ಹೇಳಿದೆ. ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ದೀಪಂಕರ್ ದತ್ತಾ ಅವ್ರ ನ್ಯಾಯಪೀಠ ಈ ಆದೇಶ ಹೊರಡಿಸಿದೆ.
-masthmagaa.com
Contact Us for Advertisement