masthmagaa.com:
ಅದಾನಿ ಗ್ರೂಪ್ ಕುರಿತು ಹಿಂಡನ್ಬರ್ಗ್ ವರದಿಯನ್ನ ಕೋರ್ಟ್ ಮೇಲ್ವಿಚಾರಣೆಯಲ್ಲಿ ತನಿಖೆ ನಡೆಸುವಂತೆ ಕೋರಿ ಸಲ್ಲಿಸಿರುವ ಅರ್ಜಿಯನ್ನ ನಾಳೆ ವಿಚಾರಣೆ ಮಾಡೋದಾಗಿ ಸುಪ್ರೀಂಕೋರ್ಟ್ ಹೇಳಿದೆ. ಲಾಯರ್ ವಿಶಾಲ್ ತಿವಾರಿ ಸಲ್ಲಿಸಿರೋ ಅರ್ಜಿಯನ್ನ ಶೀಘ್ರವೇ ವಿಚಾರಣೆ ನಡೆಸಿ ಅಂತ ಸುಪ್ರೀಂಕೋರ್ಟ್ ಬಳಿ ಮನವಿ ಮಾಡಿದ್ರು. ಇದೇ ಹಿಂಡನ್ಬರ್ಗ್ ಕೇಸ್ ಬಗ್ಗೆ ಸಲ್ಲಿಸಲಾದ ಮತ್ತೊಂದು ಪ್ರತ್ಯೇಕ ಅರ್ಜಿ ವಿಚಾರಣೆಯನ್ನ ಫೆಬ್ರುವರಿ 10 ರಂದು ಅಂದ್ರೆ ನಾಳೆ ಸುಪ್ರೀಂಕೋರ್ಟ್ ವಿಚಾರಣೆ ನಡೆಸಬೇಕಿತ್ತು. ಅದರ ಜೊತೆಯಲ್ಲಿಯೇ ಈ ಅರ್ಜಿಯನ್ನ ವಿಚಾರಣೆ ನಡೆಸೋಕೆ ಸಿಜಿಐ ಡಿ.ವೈ ಚಂದ್ರಚೂಡ್ ಅವ್ರಿದ್ದ ಪೀಠ ಒಪ್ಪಿಕೊಂಡಿದೆ.
-masthmagaa.com
Contact Us for Advertisement