ಉತ್ತರಾಖಂಡಲ್ಲಿ ಕಾಳ್ಗಿಚ್ಚು! ಮೇ 08ಕ್ಕೆ ಸುಪ್ರೀಂ ಕೋರ್ಟ್‌ ವಿಚಾರಣೆ!

masthmagaa.com:

ಉತ್ತರಾಖಂಡ್‌ನ ಸೋಲನ್‌ ಜಿಲ್ಲೆಯಲ್ಲಿ ಕೆಲ ದಿನಗಳಿಂದ ಕಾಳ್ಗಿಚ್ಚು ಹಬ್ಬುತ್ತಿದ್ದು, ಸುಮಾರು 1,144 ಹೆಕ್ಟೇರ್‌ ಅರಣ್ಯ ಪ್ರದೇಶ ಸುಟ್ಟು ಕರಕಲಾಗಿದೆ. ಪರಿಣಾಮ ಹತ್ತಿರದಲ್ಲಿರೋ ನಿವಾಸಿಗಳ ಆರೋಗ್ಯದ ಮೇಲೆ ಪರಿಣಾಮ ಬೀರಿದೆ. ಕೆಲವರಿಗೆ ಕಣ್ಣು ಉರಿ ಕಾಣಿಸಿಕೊಂಡ್ರೆ…ಇನ್ನು ಕೆಲವರಿಗೆ ಉಸಿರಾಟದ ಸಮಸ್ಯೆಗಳು ಆಗಿವೆ. ಇದು ಸುಪ್ರೀಂ ಕೋರ್ಟ್‌ತನಕ ಹೋಗಿದ್ದು, ಈ 90% ಕಾಳ್ಗಿಚ್ಚಿಗೆ ಅಲ್ಲಿನ ಜನರೇ ಕಾರಣ ಅಂತ ದೂರು ಕೊಡಲಾಗಿದೆ. ಅರ್ಜಿಗಳ ತುರ್ತು ವಿಚಾರಣೆಗೆ ಸುಪ್ರೀಂ ಕೋರ್ಟ್‌ ಮೇ 08ರಂದು ದಿನಾಂಕ ನಿಗಧಿ ಮಾಡಿದೆ.

-masthmagaa.com

Contact Us for Advertisement

Leave a Reply