ಟಿ ಎನ್ ಸೀತಾರಾಂ ನಿರ್ದೇಶನದ ‘ ಮತ್ತೆ ಮನ್ವಂತರ’ ಧಾರಾವಾಹಿಯ ಚಿತ್ರೀಕರಣ ನಾಳೆಯಿಂದ ಆರಂಭ!

masthmagaa.com:

ನಟ, ನಿರ್ದೇಶಕ ಟಿ.ಎನ್.ಸೀತಾರಾಮ್ ಅವರು ಕಳೆದ ವರ್ಷ ಹಠಾತ್ತನೆ ತಮ್ಮ ಧಾರಾವಾಹಿ ‘ಮಗಳು ಜಾನಕಿ’ಯನ್ನು ನಿಲ್ಲಿಸಿ ಪ್ರೇಕ್ಷಕರ ಬೇಸರಕ್ಕೆ ಕಾರಣವಾಗಿದ್ದರು. ಆ ಬಗ್ಗೆ ಕ್ಷಮೆಯನ್ನು ಕೂಡ ಯಾಚಿಸಿದ್ದರು.

ಇದೀಗ ಮತ್ತೆ ಹೊಸ ಧಾರಾವಾಹಿಯೊಂದಿಗೆ ಮರಳಿ ಬರುತ್ತಿದ್ದಾರೆ ಟಿ.ಎನ್.ಸೀತಾರಾಮ್. ಕೆಲವು ತಿಂಗಳುಗಳ ಹಿಂದಷ್ಟೆ ತಾವು ಹೊಸ ಧಾರಾವಾಹಿ ನಿರ್ದೇಶಿಸುತ್ತಿರುವುದಾಗಿ ಫೇಸ್‌ಬುಕ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದ ಸೀತಾರಾಮ್, ಹೊಸ ಧಾರಾವಾಹಿಗೆ ಹೆಸರು ಸೂಚಿಸುವಂತೆ ನೆಟ್ಟಿಗರನ್ನ ಕೇಳಿದ್ದರು. ಅಂತೆಯೇ ನೂರಾರು ಮಂದಿ ಹಲವಾರು ಹೆಸರುಗಳನ್ನು ಕೂಡ ಕಳಿಸಿಕೊಟ್ಟಿದ್ದರು. ಕೊನೆಗೆ ‘ಮತ್ತೆ ಮನ್ವಂತರ’ ಎಂಬ ಶೀರ್ಷಿಕೆ ಅಂತಿಮವಾಗಿತ್ತು. ಈ ಹಿಂದೆ ‘ಮನ್ವಂತರ’ ಹೆಸರಿನ ಧಾರಾವಾಹಿಯನ್ನು ಸೀತಾರಾಮ್ ನಿರ್ದೇಶನ ಮಾಡಿದ್ದರು. ಇದೀಗ ‘ಮತ್ತೆ ಮನ್ವಂತರ’ ನಿರ್ದೇಶನ ಮಾಡುತ್ತಿದ್ದಾರೆ. ಆದರೆ ಇದು ಹಳೆಯ ‘ಮನ್ವಂತರ’ ಧಾರಾವಾಹಿಯ ಮುಂದುವರೆದ ಭಾಗವಾಗಿರುವುದಿಲ್ಲ ಎಂಬ ಮಾಹಿತಿ ಇದ್ದು, ಟಿ.ಎನ್.ಸೀತಾರಾಮ್ ಅವರು ಈ ಧಾರಾವಾಹಿಯಲ್ಲೂ ವಕೀಲನ ಪಾತ್ರ ನಿರ್ವಹಿಸಲಿದ್ದಾರೆ.

ಈ ಧಾರಾವಾಹಿಯು ಯುವ ಮಹಿಳಾ ಕ್ರೀಡಾಪಟುವಿನ ಜೀವನದ ಸುತ್ತ ನಡೆವ ಘಟನೆಯನ್ನು ಆಧರಿಸಲಿದ್ದು ನಾಳೆ ಇಂದ ಚಿತ್ರೀಕರಣ ಆರಂಭವಾಗಲಿದೆ ಎಂದು ಟಿ. ಎನ್. ಸೀತಾರಾಂ ಅವರು ತಮ್ಮ ಫೇಸ್ಬುಕ್ ವಾಲ್ ನಲ್ಲಿ ಬರೆದುಕೊಂಡಿದ್ದಾರೆ.

-masthmagaa.com

Contact Us for Advertisement

Leave a Reply