ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಕೆ. ಅಣ್ಣಾಮಲೈ ಮೇಲೆ ಮಾನನಷ್ಟ ಕೇಸ್‌ ದಾಖಲು!

masthmagaa.com:

ತಮಿಳುನಾಡು ರಾಜ್ಯ ಬಿಜೆಪಿ ಅಧ್ಯಕ್ಷ ಕೆ.ಅಣ್ಣಾಮಲೈ ವಿರುದ್ಧ ಅಲ್ಲಿನ ಸರ್ಕಾರ ಮಾನನಷ್ಟ ಮೊಕದ್ದಮೆ ದಾಖಲಿಸಿದೆ. ಅಣ್ಣಾಮಲೈ ತಮಿಳುನಾಡು ಸಿಎಂ ಎಂ.ಕೆ ಸ್ಟಾಲಿನ್‌ ಅವರ ಮೇಲೆ ʻಡಿಎಂಕೆ ಫೈಲ್ಸ್‌ʼ ಮೂಲಕ ಭ್ರಷ್ಟಾಚಾರ ಆರೋಪ ಹೊರಿಸಿ ಮಾನಹಾನಿ ಮಾಡ್ತಿದ್ದಾರೆ ಅಂತ ಆರೋಪಿಸಲಾಗಿದೆ. 2011ರಲ್ಲಿ ಚೆನ್ನೈ ಮೆಟ್ರೊ ಒಪ್ಪಂದಕ್ಕಾಗಿ ಎಂ.ಕೆ ಸ್ಟಾಲಿನ್‌ಗೆ 200 ಕೋಟಿ ರೂಪಾಯಿ ನೀಡಲಾಗಿದೆ ಅಂತ ಅಣ್ಣಾಮಲೈ ಆರೋಪಿಸಿದ್ರು. ಜೊತೆಗೆ ಸ್ಟಾಲಿನ್‌ರ ಡಿಎಂಕೆ ಪಕ್ಷದ ನಾಯಕರು 1.34 ಲಕ್ಷ ಕೋಟಿ ರೂಪಾಯಿ ಮೌಲ್ಯದ ಆಸ್ತಿ ಹೊಂದಿದ್ದು, ಭ್ರಷ್ಟಾಚಾರದಿಂದ ಗಳಿಸಿದ್ದಾರೆ ಅಂತ ಅಣ್ಣಾಮಲೈ ಆರೋಪ ಮಾಡಿದ್ರು. ಇದಕ್ಕೆ ಮಾನನಷ್ಟ ಮೊಕದ್ದಮೆ ದಾಖಲಿಸಿದೆ.

-masthmagaa.com

Contact Us for Advertisement

Leave a Reply