ತಮಿಳುನಾಡಿನಲ್ಲಿ ಮುರುಗನ್‌ ದೇವರ ಕಾನ್ಫರೆನ್ಸ್‌ಗೆ ಯೋಜನೆ!

masthmagaa.com:

ಚುನಾವಣಾ ಹೊಸ್ತಿಲಲ್ಲೇ ಅಯೋಧ್ಯೆ ರಾಮಮಂದಿರ ನಿರ್ಮಾಣ ಮಾಡಿ ಬಿಜೆಪಿ ಸಂಭ್ರಮದಲ್ಲಿದ್ರೆ ಇದೀಗ ತಮಿಳುನಾಡಿನ DMK ಸರ್ಕಾರ ಮುರುಗನ್‌ ದೇವರ ಕಡೆ ಮುಖ ಮಾಡಿದ್ದಾರೆ. ತಮಿಳುನಾಡಿನ ಪ್ರಮುಖ ಆರಾಧ್ಯ ದೇವರಾದ ಮುರುಗನ್‌ ದೇವರ ಹೆಸರಲ್ಲಿ ಇಂಟರ್‌ನ್ಯಾಷನಲ್‌ ಕಾನ್ಫರೆನ್ಸ್‌ ನಡೆಸೋಕೆ DMK ಸರ್ಕಾರ ಪ್ಲಾನ್‌ ಮಾಡ್ಕೊಂಡಿದೆ. ಈ ಕಾನ್ಫರೆನ್ಸ್‌ ಇದೇ ವರ್ಷ ಜೂನ್‌ ಅಥ್ವಾ ಜುಲೈ ತಿಂಗಳಲ್ಲಿ ನಡೆಯಲಿದೆ. ಇದ್ರಲ್ಲಿ ವಿಶ್ವದಾದ್ಯಂತ ಮುರುಗನ್‌ ದೇವರ ಭಕ್ತಾದಿಗಳು ಒಂದಾಗಲಿದ್ದಾರೆ. ಈ ವೇಳೆ ಎಕ್ಸಿಬೀಷನ್‌, ಕಾನ್‌ಕ್ಲೇವ್‌ಗಳು ಮತ್ತು ಮುರುಗನ್‌ ದೇವರ ಕುರಿತು ಸಿದ್ದ ಮಾಡಲಾದ ರಿಸರ್ಚ್‌ ಪೇಪರ್ಸ್‌ ಸಬ್‌ಮಿಟ್‌ ಮಾಡಲಾಗುತ್ತೆ ಅಂತ ತಮಿಳುನಾಡು ಹಿಂದು ಧಾರ್ಮಿಕ ಮತ್ತು ದತ್ತಿ ಸಚಿವರಾದ ಪಿ ಕೆ ಸೇಕರ್‌ ಬಾಬು ತಿಳಿಸಿದ್ದಾರೆ.

-masthmagaa.com

Contact Us for Advertisement

Leave a Reply