ಸಿಎಂ ಬೊಮ್ಮಾಯಿ ಅವ್ರ ಮಾಧ್ಯಮ ಸಂಯೋಜಕ ಎಚ್. ಬಿ. ಗುರುಲಿಂಗಸ್ವಾಮಿ ನಿಧನ!

masthmagaa.com:

ಸಿಎಂ ಬಸವರಾಜ ಬೊಮ್ಮಾಯಿ ಅವ್ರ ಮಾಧ್ಯಮ ಸಂಯೋಜಕ ಎಚ್. ಬಿ. ಗುರುಲಿಂಗಸ್ವಾಮಿ ಹೊಳಿಮಠ ಇಂದು ನಿಧನರಾಗಿದ್ದಾರೆ. 45 ವರ್ಷದ ಗುರುಲಿಂಗಸ್ವಾಮಿ ಇಂದು ಬೆಳಿಗ್ಗೆ ಜಿಮ್‌ಗೆ ಹೋಗಿ ವರ್ಕೌಟ್‌ ಮಾಡೋವಾಗ ಎದೆನೋವು ಕಾಣಿಸಿಕೊಂಡಿದೆ. ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗ ಮಧ್ಯದಲ್ಲೇ ನಿಧನರಾಗಿದ್ದಾರೆ. ಇವರ ಸಾವಿಗೆ ಸಂತಾಪ ಸೂಚಿರೊ ಬೊಮ್ಮಾಯಿ, ಗುರುಲಿಂಗಸ್ವಾಮಿ ಅವ್ರ ಅಕಾಲಿಕ ನಿದನದಿಂದ ಪತ್ರಿಕೋದ್ಯಮಕ್ಕೆ ಹಾಗೂ ವೈಯಕ್ತಿಕವಾಗಿಯೂ ದೊಡ್ಡ ನಷ್ಟವಾಗಿದೆ ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply