ಆಂಧ್ರ ಸಿಎಂ ಜಗನ್‌ ಮಹೋನ್‌ ರೆಡ್ಡಿ ಅವರ ಸಹೋದರಿ ಬಂಧನ!

masthmagaa.com:

ಆಂಧ್ರ ಸಿಎಂ ಜಗನ್‍ ಮೋಹನ್‌ ಅವರ ಸಹೋದರಿ ಹಾಗೂ ವೈಎಸ್‍ಆರ್ ತೆಲಂಗಾಣ ಪಾರ್ಟಿಯ ಮುಖ್ಯಸ್ಥೆ ವೈ.ಎಸ್.ಶರ್ಮಿಳಾ ಅವರನ್ನು ಬಂಧಿಸಿ ಬಳಿಕ ಬಿಡುಗಡೆ ಮಾಡಲಾಗಿದೆ. ತೆಲಂಗಾಣದಲ್ಲಿ ಆಡಳಿತರೂಢ ಭಾರತೀಯ ರಾಷ್ಟ್ರೀಯ ಸಮಿತಿಯ ಶಾಸಕರೊಬ್ಬರ ವಿರುದ್ಧ ಅವಹೇಳನಕಾರಿ ಪದ ಬಳಕೆ ಆರೋಪದ ಮೇಲೆ ಈ ಬಂಧನವಾಗಿತ್ತು. ಅಲ್ಲದೇ ಶರ್ಮಿಳಾ ವಿರುದ್ಧ ಎಸ್‍ಸಿ-ಎಸ್‍ಟಿ ದೌರ್ಜನ್ಯ ತಡೆ ಕಾಯ್ದೆ ಅಡಿ ಪ್ರಕರಣ ದಾಖಲಿಸಲಾಗಿತ್ತು. ಆದ್ರೆ ಈಗ ಶರ್ಮಿಳಾರನ್ನ ಬಿಡುಗಡೆ ಮಾಡಲಾಗಿದೆ. ಈ ವೇಳೆ ಮಾತನಾಡಿದ ಶರ್ಮಿಳಾ ಅವರು, ತೆಲಂಗಾಣ ಅನ್ನೋದು ಭಾರತದಲ್ಲಿರೋ ಅಫ್ಥಾನಿಸ್ತಾನ. ಇಲ್ಲಿನ ಸಿಎಂ ಕೆಸಿಆರ್‌ ತಾಲಿಬಾನ್‌ ರೀತಿ ಡಿಕ್ಟೇಟರ್.‌ ತೆಲಂಗಾಣಕ್ಕೆ ಭಾರತದ ಸಂವಿಧಾನ ಇಲ್ಲ. ಅಲ್ಲಿರೋದು ಕೆಸಿಆರ್‌ ಸಂವಿಧಾನ ಅಂತ ಆಕ್ರೋಶ ಹೊರಹಾಕಿದ್ದಾರೆ.

-masthmagaa.com

Contact Us for Advertisement

Leave a Reply