masthmagaa.com:
ರಾಜ್ಯದಲ್ಲಿ ಮತಾಂತರದ ಒಂದೊದೇ ಜಾಲಗಳು ಹೊರಬೀಳ್ತಾಯಿವೆ. ಇದೀಗ ತುಮಕೂರಿನಲ್ಲಿ ಹಣ ಹಾಗೂ ವಿವಿಧ ಆಮಿಷಗಳನ್ನ ಒಡ್ಡಿ ಕ್ರೈಸ್ತ ಧರ್ಮಕ್ಕೆ ಮತಾಂತರ ಮಾಡೋಕೆ ಪ್ರಯತ್ನ ಮಾಡ್ತಿದ್ರು ಅನ್ನೋ ವಿಚಾರ ಮಾಹಿತಿ ಬೆಳಕಿಗೆ ಬಂದಿದೆ. ಇಬ್ಬರು ಮಹಿಳೆಯರು ಹಾಗೂ ಓರ್ವ ವ್ಯಕ್ತಿ ಸೇರಿ ಮತಾಂತರ ಮಾಡೋಕೆ ಪ್ರಯತ್ನಿಸಿದ್ದಾರೆ ಅಂತ ಆರೋಪಿಸಿ ರವಿ ಅನ್ನೋ ವ್ಯಕ್ತಿ ಪೊಲೀಸರಿಗೆ ದೂರು ನೀಡಿದ್ದಾರೆ. ರವಿ ಅವ್ರ ಮನೆಗೆ ಬಂದಿದ್ದ ಮತಾಂತರಿಗಳು, ಕ್ರೈಸ್ತ ಧರ್ಮಕ್ಕೆ ಮತಾಂತರ ಆದ್ರೆ ನಿಮಗೆ ಪರಲೋಕ ಪ್ರಾಪ್ತಿಯಾಗುತ್ತೆ ಅಂತ ಹೇಳಿದ್ದಾರೆ. ಅಷ್ಟೆ ಅಲ್ದೆ ಹಿಂದೂ ದೇವರುಗಳನ್ನ ಅವಹೇಳನ ಮಾಡಿದ್ದಾರೆ ಅಂತ ರವಿ ಆರೋಪಿಸಿದ್ದಾರೆ. ಈ ಬಗ್ಗೆ ಕೇಸ್ ದಾಖಲಿಸಲಾಗಿದೆ ಅಂತ ಪೊಲೀಸರು ತಿಳಿಸಿದ್ದಾರೆ.
-masthmagaa.com
Contact Us for Advertisement