ರಾಜ್ಯಸರ್ಕಾರವನ್ನ ಬಿಡ್ತಿಲ್ಲ ಪರ್ಸೆಂಟೇಜ್‌ ಭೂತ! HDK, ಸಿದ್ದು ವಾದವೇನು?

masthmagaa.com:

ರಾಜ್ಯ ಸರ್ಕಾರದ ವಿರುದ್ದ ಕೇಳಿ ಬರ್ತಿರೋ ಪರ್ಸೆಂಟೇಜ್‌ ವಿವಾದ ಇಟ್ಕೊಂಡು ರಾಜಕೀಯ ಪಕ್ಷಗಳು ನಡೆಸ್ತಿರೋ ಕೆಸರೆರಾಚಾಟ ಕಂಟಿನ್ಯೂ ಆಗಿದೆ. ನಿನ್ನೆ ಸಿದ್ದರಾಮಯ್ಯ ಏನು ಸತ್ಯಹರಿಶ್ಚಂದ್ರರಾ ಅಂತ ಬಸವರಾಜ ಬೊಮ್ಮಾಯಿ ಹೇಳಿದ್ರು. ಇದೀಗ ಅದಕ್ಕೆ ತಿರುಗೇಟು ಕೊಟ್ಟಿರೋ ಮಾಜಿ ಸಿಎಂ ಸಿದ್ದರಾಮಯ್ಯ ನಾನು ಸತ್ಯ ಹರಿಶ್ಚಂದ್ರ ಅಥವಾ ಆತನ ವಂಶದವ ಅಂತ ಹೇಳಿಲ್ಲ. ನಮ್ಮ ಕಾಲದಲ್ಲಿ ಹಗರಣ ನಡೆದಿದ್ರೆ ಅದನ್ನೂ ಸೇರಿಸಿ ಹೈಕೋರ್ಟ್‌ನ ಹಾಲಿ ನ್ಯಾಯಾದೀಶರ ನೇತೃತ್ವದಲ್ಲಿ ನ್ಯಾಯಾಂಗ ತನಿಖೆ ನಡೆಸಲಿ ಅಂತ ಸವಾಲು ಎಸೆದಿದ್ದಾರೆ. ಇನ್ನು ಹೆಚ್‌ಡಿ ಕುಮಾರಸ್ವಾಮಿ ಮಾತನಾಡಿ ಸ್ವಾತಂತ್ರ ಪೂರ್ವದಿಂದಲೂ ಕಮಿಷನ್‌ ಇತ್ತು. ಆದ್ರೆ ಅದು ಒಂದು ಮಿತಿಯಲ್ಲಿತ್ತು. ಆದ್ರೆ ಬಿಜೆಪಿ ಸರ್ಕಾರ ಬಂದಾಗಿಂದ ಅದು ಜಾಸ್ತಿಯಾಗಿದೆ. ಗುತ್ತಿಗೆದಾರರಿಗೆ ಕಿರುಕುಳ ಕೊಟ್ಟು ಕಮಿಷನ್‌ ವಸೂಲಿ ಮಾಡಲಾಗ್ತಿದೆ ಅಂತ ಆರೋಪಿಸಿದ್ದಾರೆ.

-masthmagaa.com

Contact Us for Advertisement

Leave a Reply