ರಷ್ಯಾ-ಯುಕ್ರೇನ್‌ ಯುದ್ಧದಲ್ಲಿ ಭಾರತದ ನಿಲುವು ಸರಿಯಿದೆ: ಮನಮೋಹನ್‌ ಸಿಂಗ್‌

masthmagaa.com:

ರಷ್ಯಾ- ಯುಕ್ರೇನ್‌ ಯುದ್ಧದಲ್ಲಿ ಯುಕೇನ್‌ಗೆ ಕೊಂಚ ಮುನ್ನಡೆಯಾಗಿದೆ. ರಷ್ಯಾ ವಿರುದ್ಧ ತೀವ್ರ ಪ್ರತಿದಾಳಿ ಪ್ರಾರಂಭಿಸಿರುವ ಯುಕ್ರೇನ್‌ ಕೆಲವು ಭಾಗಗಳಲ್ಲಿ ಮುನ್ನಡೆ ಸಾಧಿಸಿರೋದಾಗಿ ಹೇಳಿದೆ. ರಷ್ಯಾ ಆಕ್ರಮಿಸಿಕೊಂಡಿರುವ ಬಖ್ಮುತ್‌ನ ಕೆಲವು ಪ್ರದೇಶಗಳನ್ನ ವಶಪಡಿಸಿಕೊಂಡಿದ್ದು, ಭಾಗಶಃ ಯಶಸ್ಸು ಸಿಕ್ಕಿದೆ ಅಂತ ಯುಕ್ರೇನ್‌ ಅಧಿಕಾರಿಗಳು ಹೇಳಿದ್ದಾರೆ. ಆದ್ರೆ ಬಖ್ಮುತ್‌ ಬಳಿ ಯುಕ್ರೇನ್‌ ಪಡೆಗಳನ್ನ ಹಿಮ್ಮಟ್ಟಿಸಲಾಗಿದೆ ಅಂತ ರಷ್ಯಾ ಹೇಳಿದೆ. ಇತ್ತ ರಷ್ಯಾ- ಯುಕ್ರೇನ್‌ ಯುದ್ಧದ ವಿಚಾರದಲ್ಲಿ ಭಾರತದ ನಿಲುವು ಸರಿಯಾಗಿದೆ ಅಂತ ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ಹೇಳಿದ್ದಾರೆ. ಜೊತೆಗೆ ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದ ಸರ್ಕಾರ ದೇಶದ ಸಾರ್ವಭೌಮತೆ ಹಾಗೂ ಆರ್ಥಿಕ ಹಿತಾಸಕ್ತಿಗೆ ಮೊದಲ ಸ್ಥಾನ ನೀಡಿದ್ದು, ಶಾಂತಿಗಾಗಿ ಮನವಿ ಮಾಡಿರೋದು ಸರಿಯಾಗಿದೆ ಅಂತ ನಾನು ನಂಬುತ್ತೇನೆ ಅಂತ ಸಿಂಗ್‌ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply