ಹಣ್ಣು ಖರೀದಿಯಲ್ಲಿ ಹಿಂದೂ-ಮುಸ್ಲಿಂ ಬೇಡ: ಸಚಿವ ಆರ್. ಅಶೋಕ್​

masthmagaa.com:

ಇನ್ನು ಮಾವು ಖರೀದಿಯಲ್ಲಿ ಮುಸ್ಲಿಮರಿಗೆ ಬಹಿಷ್ಕಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರೋ ಕಂದಾಯ ಸಚಿವ ಆರ್.ಅಶೋಕ್​, ಕೆಲವರು ಮಾವು ಖರೀದಿಗೆ ಸಂಬಂಧಿಸಿದಂತೆ ಪೊಲೀಸರನ್ನು ಭೇಟಿಯಾಗೋದು, ಡಿಸಿಗಳನ್ನು ಭೇಟಿಯಾಗೋದು ಮಾಡ್ತಿದ್ದಾರೆ. ಇದು ಒಳ್ಳೆಯ ಬೆಳವಣಿಗೆ ಅಲ್ಲ. ಇದಕ್ಕೆ ಸರ್ಕಾರದ ಯಾವುದೇ ಬೆಂಬಲ ಇಲ್ಲ. ಹಿಂದೆಯಿಂದ ಹೇಗೆ ನಡೆಯುತ್ತಿದೆಯೋ ಹಾಗೆ ನಡೆಯಬೇಕು. ರೈತರ ಹಣ್ಣುಗಳನ್ನು ಯಾರು ಬೇಕಾದ್ರೂ ಖರೀದಿಸಬಹುದು.. ಜನ ಕೂಡ ಇದು ಸರ್ಕಾರದ ನಿಲುವು ಅಂತ ಭಾವಿಸಬಾರದು. ಮೊದಲಿಂದ ಹೇಗೆ ನಡೀತಿದ್ಯೋ ಹಾಗೇ ನಡೆಯಬೇಕು ಅಂತ ಹೇಳಿದ್ದಾರೆ. ಮುಸ್ಲಿಂ ಬಾಂಧವರು ಹಿಂದೂ ವಿಗ್ರಹ ಕೆತ್ತನೆ ಮಾಡಿದ್ರೆ ಅದು ಒಳ್ಳೆಯ ವಿಚಾರ.. ಮೊಸರಲ್ಲಿ ಕಲ್ಲು ಹುಡುಕೋ ಪ್ರಯತ್ನ ಮಾಡಬಾರದು ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply