masthmagaa.com:
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅಧಿಕಾರದಿಂದ ಕೆಲಗಿಳೀಬೇಕು ಅಂತ RBIಗೆ ಬೆದರಿಕೆ ಮೇಲ್ ಬಂದಿದೆ. RBI, HDFC, ICICI ಗಳ ಕೇಂದ್ರ ಕಚೇರಿಗಳ ಮೇಲೆ ಬಾಂಬ್ ದಾಳಿ ನಡೆಸ್ತೀವಿ ಅಂತ ದುಷ್ಕರ್ಮಿಗಳು RBIಗೆ ಮೇಲ್ ಮಾಡಿದ್ದಾರೆ. ಅಲ್ಲದೆ RBI ಶಕ್ತಿಕಾಂತ್ ದಾಸ್ ಅವರನ್ನ ಕೂಡ ಅಧಿಕಾರದಿಂದ ಕೆಳಗಿಳಿಸ್ಬೇಕು ಅಂತ ದುಷ್ಕರ್ಮಿಗಳು ಬೇಡಿಕೆ ಇಟ್ಟಿದ್ದಾರೆ. ಮುಂಬೈನ 11 ಸ್ಥಳಗಳಲ್ಲಿ ಮಂಗಳವಾರ ಮಧ್ಯಾಹ್ನ ಬಾಂಬ್ ಸ್ಪೋಟಿಸ್ತೀವಿ ಅಂತ ಮೇಲ್ನಲ್ಲಿ ಹೇಳಲಾಗಿತ್ತು. ಖಲೀಫತ್ ಇಂಡಿಯಾ ಅನ್ನೋ ಮೇಲ್ ಐಡಿಯಿಂದ ಈ ಮೇಲ್ ಬಂದಿತ್ತು ಎನ್ನಲಾಗ್ತಿದೆ. ಇನ್ನು ದೆಹಲಿಯಲ್ಲಿರೋ ಇಸ್ರೇಲ್ ಎಂಬಸಿ ಬಳಿ ದಾಳಿ ನಡೆಸ್ತೀವಿ ಅಂತ ಅನಾಮಿಕ ಕಾಲ್ ಒಂದು ದೆಹಲಿ ಪೊಲೀಸರಿಗೆ ಬಂದಿದೆ. ಸ್ಪೆಷಲ್ ಸೆಲ್ನ ಪೊಲೀಸರು ಹಾಗೂ ಬಾಂಬ್ ಸ್ಕಾಡ್ ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ. ಆದ್ರೆ ಯಾವುದೇ ಅನುಮಾನಾಸ್ಪದ ವಸ್ತುಗಳು ಎಂಬಸಿ ಬಳಿ ದೊರಕಿಲ್ಲ.
-masthmagaa.com
Contact Us for Advertisement