masthmagaa.com:
ಸೆಪ್ಟಂಬರ್ ತಿಂಗಳಲ್ಲಿ ಸುರಿದ ಭಾರೀ ಮಳೆಯಿಂದ ಬೆಂಗಳೂರಿನಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿತ್ತು. ಇದರ ಬೆನ್ನಲ್ಲೇ ಗ್ರೀನ್ ಪೀಸ್ ಇಂಡಿಯಾ ಸಂಸ್ಥೆ ಸಿಎಂ ಬಸವರಾಜ ಬೊಮ್ಮಾಯಿಗೆ ಪತ್ರ ಬರೆದಿದೆ. ತ್ರಿಪಥ ಹೆದ್ದಾರಿ ನಿರ್ಮಾಣ ಯೋಜನೆ ಅವೈಜ್ಞಾನಿಕವಾಗಿ ಕೂಡಿದ್ದು ಇದನ್ನ ರದ್ದುಗೊಳಿಸಬೇಕು ಅಂತ ಹೇಳಿದೆ. ನಗರದಲ್ಲಿ ಹೆಚ್ಚಿನ ಮೇಲ್ಸೇತುವೆ ಹಾಗೂ ಎಲಿವೇಟೆಡ್ ಕಾರಿಡಾರ್ ಗಳನ್ನು ನಿರ್ಮಿಸಬಾರದು. ಖಾಸಗಿ ವಾಹನಗಳ ಹೆಚ್ಚು ಬಳಕೆಯನ್ನು ನಿರ್ಬಂಧಿಸಿ ಸಾರ್ವಜನಿಕ ಸಾರಿಗೆ ಬಳಸಲು ಜನರಿಗೆ ಹೆಚ್ಚಿನ ಅವಕಾಶ ಮಾಡಿಕೊಡಬೇಕು ಅಂತ ಸಲಹೆ ನೀಡಿದೆ. ಅಲ್ದೇ ನಗರದಲ್ಲಿ ಪ್ರವಾಹವನ್ನ ತಡೆಗಟ್ಟೋಕೆ ಮತ್ತು ಸಂಚಾರ ದಟ್ಟಣೆಯನ್ನು ಕಡಿಮೆ ಮಾಡೋಕೆ ಲಾಂಗ್ ಟರ್ಮ್ ಸೆಲ್ಯೂಷನ್ ಬೇಕು ಅಂತ ಒತ್ತಾಯಿಸಿದೆ.
-masthmagaa.com
Contact Us for Advertisement